ವಿಶಾಖಪಟ್ಟಣ ದುರಂತದ ಮರುದಿನವೇ ಮತ್ತೊಂದು ಆಘಾತ: 15 ವಲಸಿಗರ ಸಾವು

ಶುಕ್ರವಾರ, 8 ಮೇ 2020 (09:31 IST)
ಮುಂಬೈ: ಕೊರೋನಾ ಆಯ್ತು.. ವಿಶಾಖಪಟ್ಟಣ ಅನಿಲ್ ದುರಂತವಾಯ್ತು.. ಇದರ ಬೆನ್ನಲ್ಲೇ ಈಗ ದೇಶದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ರೈಲು ಅಪಘಾತದಲ್ಲಿ 15 ವಲಸಿಗರು ಸಾವನ್ನಪ್ಪಿದ್ದಾರೆ.


ಮಹಾರಾಷ್ಟ್ರದ ಔರಂಗದಾಬಾದ್ ಬಳಿ ಗೂಡ್ಸ್ ರೈಲು ಡಿಕ್ಕಿ ಹೊಡೆದು 15 ವಲಸಿಗರು ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ.

ಇಂದು ಮುಂಜಾನೆ 5.15 ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ