ಅನುಭವ, ಯುವ ಮತ್ತು ಸಾಮಾಜಿಕ ಹಿನ್ನೆಲೆ ಮಿಶ್ರಣದ ಸಚಿವ ಸಂಪುಟದ ಇದಾಗಿದೆ.
19 ಹೊಸ ಮುಖಗಳ ಪಟ್ಟಿ ಇಂತಿದೆ: ರಮೇಶಚಂದ್ರಪ್ಪ ಜಿಗಜಿಣಗಿ- ಕರ್ನಾಟಕದ ದಲಿತ ನಾಯಕ, ಬಿಜೆಪಿ ಲೋಕಸಭಾ ಸದಸ್ಯ, ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಫಗ್ಗಾನ್ ಸಿಂಗ್ ಕುಲಾಸ್ತೆ. ಇತರ ದಲಿತ ಮುಖಗಳೆಂದರೆ ಷಹಜಹಾನ್ಪುರ ಸಂಸದ ಕೃಷ್ಣ ರಾಜ್, ಬಿಕನೇರ್ ಸಂಸದ ಅರ್ಜುನ್ ರಾಮ್ ಮೇಘ್ವಾಲ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಮ್ ದಾಸ್ ಅಠ್ವಾಲೆ (ಮಹಾರಾಷ್ಟ್ರ) ಮತ್ತು ಅಜಯ್ ತಮ್ಟಾ (ಉತ್ತರಖಾಂಡ್).
ಲೇಖಕ, ಪತ್ರಕರ್ತ ಎಂಜೆ ಅಕ್ಬರ್, ರಾಜಸ್ಥಾನದ ಜಾಟ್ ನಾಯಕಾರದ ಪಿ.ಪಿ ಚೌಧರಿ ಮತ್ತು ಸಿ. ಆರ್ ಚೌಧರಿ, ಪ್ರಸಿದ್ಧ ವೈದ್ಯ ಸುಭಾಶ್ ರಾಮ್ ರಾವ್ ಭಾಮ್ರೆ- ಸಹ ಸ್ಥಾನ ಪಡೆದಿದ್ದಾರೆ.
ಸಂಪುಟದಲ್ಲಿ ಉತ್ತರ ಪ್ರದೇಶ, ರಾಜಸ್ಥಾನ್, ಗುಜರಾತ್, ಬಂಗಾಳ, ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ, ಕರ್ನಾಟಕ ಮತ್ತು ಅಸ್ಸಾಂ ರಾಜ್ಯಗಳಿಗೆ ಮಣೆಹಾಕಲಾಗಿದೆ.
ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಉತ್ತರಪ್ರದೇಶದಿಂದ ಮಹೇಂದ್ರ ನಾಥ್ ಪಾಂಡೆ, ದಲಿತ ನಾಯಕ ಕೃಷ್ಣ ರಾಜ್(ಷಹಜಾನ್ಪುರದ ಸಂಸದ), ಮಿತ್ರ ಪಕ್ಷ ಅಪ್ನಾ ದಳದ ನಾಯಕಿ ಅನುಪ್ರಿಯಾ ಸಿಂಗ್ ಪಟೇಲ್ ಸಚಿವ ಸ್ಥಾನವನ್ನು ಪಡೆದಿದ್ದಾರೆ.