ಭಾರತ-ಪಾಕ್ ಯುದ್ಧಕ್ಕೆ 50 ವರ್ಷ; ಪ್ರಧಾನಿ ಮೋದಿ, ಬಿಎಸ್ ವೈ ಯಿಂದ ಯೋಧರಿಗೆ ನಮನ

ಬುಧವಾರ, 16 ಡಿಸೆಂಬರ್ 2020 (10:31 IST)
ನವದೆಹಲಿ: 1971ರ ಭಾರತ-ಪಾಕ್ ಯುದ್ಧಕ್ಕೆ 50 ವರ್ಷವಾದ ಹಿನ್ನಲೆಯಲ್ಲಿ ದೆಹಲಿಯಲ್ಲಿ ‘ಸ್ವರ್ಣಿಮ್  ವಿಜಯ್ ವರ್ಷ’ ಆಚರಣೆ ಮಾಡಲಾಗುತ್ತಿದೆ.

ವಾರ್ ಮೆಮೋರಿಯಲ್ ನಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಪ್ರಧಾನಿ ಮೋದಿ ಅವರು ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಹಾಗೇ ರಕ್ಷಣಾ ಸಚಿವ ರಾಜನಾಥ್ ಸಿಂಗ್  ಅವರು ಕೂಡ ಗೌರವ ಸಲ್ಲಿಸಿದ್ದಾರೆ. ಹುತಾತ್ಮ ಯೋಧರಿಗೆ 3 ಸೇನಾಪಡೆಗಳಿಂದ ಗೌರವ ನಮನ ಸಲ್ಲಿಸಲಾಗಿದೆ.

ಹಾಗೇ ರಾಜ್ಯದಲ್ಲೂ ಕೂಡ ವಿಜಯ್ ದಿವಸ್ ಆಚರಿಸಲಾಗುತ್ತಿದ್ದು, ನಗರದ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಕಾರ್ಯಕ್ರಮ ನಡೆಸಿದ್ದು, ಹುತಾತ್ಮ ಯೋಧರಿಗೆ ಸಿಎಂ ಬಿಎಸ್ ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ