ಏತನ್ಮಧ್ಯೆ, ಪಾಕಿಸ್ತಾನದ ಅಂತರಿಕ ವ್ಯವಹಾರಗಳ ಸಚಿವರು ಸಭೆಯ ಮುಕ್ತಾಯವಾದ ಕೂಡಲೇ ತೆರಳಿದ ಹಿನ್ನೆಲೆಯಲ್ಲಿ , ರಾಜನಾಥ್ ಸಿಂಗ್ ಭೋಜನವನ್ನು ತಿರಸ್ಕರಿಸುವ ನಿರ್ಧಾರ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.
ಪಂಚತಾರಾ ಐಷಾರಾಮಿ ಸೆರೆನಾ ಹೋಟೆಲ್ನಲ್ಲಿ ನಡೆಯುತ್ತಿರುವ ಸಾರ್ಕ್ ಸಮ್ಮೇಳನಕ್ಕಾಗಿ ಆಗಮಿಸಿದ ರಾಜನಾಥ್ ಸಿಂಗ್, ಗೇಟ್ ಬಳಿ ನಿಂತಿದ್ದ ಪಾಕ್ ಗೃಹ ಸಚಿವ ಖಾನ್ ಅವರೊಂದಿಗೆ ಇಷ್ಟವಿಲ್ಲದಂತೆ ಹ್ಯಾಂಡ್ಶೇಕ್ ಮಾಡಿ ಸಭೆಗೆ ತೆರಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕಿಂತ ಮೊದಲು ರಾಜನಾಥ್ ಸಿಂಗ್, ಭಯೋತ್ಪಾದಕರನ್ನು ವೈಭವೀಕರಿಸುವುದಲ್ಲದೇ ಅವರನ್ನು ಹುತಾತ್ಮರೆಂದು ಘೋಷಿಸುವುದು ಸರಿಯಲ್ಲ. ಭಯೋತ್ಪಾದಕರ ವಿರುದ್ಧ ಕಠಿಣ ಕಾರ್ಯಾಚರಣೆ ನಡೆಯಬೇಕು ಎನ್ನುವ ಸ್ಪಷ್ಟ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿದ್ದರು.