ಜೆಎನ್ ಯು ಕ್ಯಾಂಪಸ್ ನಲ್ಲಿ “ಸ್ವತಂತ್ರ ಕಾಶ್ಮೀರ” ಬರಹ ಪ್ರತ್ಯಕ್ಷ!

ಶುಕ್ರವಾರ, 3 ಮಾರ್ಚ್ 2017 (10:58 IST)
ನವದೆಹಲಿ: ಈಗಾಗಲೇ ದೇಶ ವಿರೋಧಿ ಚಟುವಟಿಕೆಗಳಿಗೆ ಕುಖ್ಯಾತಿ ಪಡೆದಿರುವ ದೆಹಲಿಯ ಜೆಎನ್ ಯು ವಿವಿ ಕ್ಯಾಂಪಸ್ ಮತ್ತೊಮ್ಮೆ ವಿವಾದಕ್ಕೀಡಾಗಿದೆ. “ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಡಿಸಿ” ಎಂದು ಬರಹಗಳು ಪ್ರತ್ಯಕ್ಷವಾಗಿದೆ.


ವಿವಿಯ ಸಮಾಜ ವಿಜ್ಞಾನ ವಿಭಾಗದ ಗೋಡೆಯಲ್ಲಿ ಇಂತಹ ಬರಹಗಳನ್ನು ಬರೆದಿರುವುದನ್ನು ವಿದ್ಯಾರ್ಥಿಗಳು ಗಮನಿಸಿದ್ದಾರೆ. ಎಡಪಂಥೀಯ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಯೂನಿಯನ್ (ಡಿಎಸ್ ಯು) ಈ ಬರಹ ಬರೆದಿರುವುದಾಗಿ ಉಲ್ಲೇಖಿಸಲಾಗಿದೆ. “ಕಾಶ್ಮೀರಕ್ಕೆ ಸ್ವಾತಂತ್ರ್ಯ!, ಪ್ಯಾಲೆಸ್ತೀನ್ ನನ್ನು ಮುಕ್ತಿಗೊಳಿಸಿ! ಸ್ವಯಂ ಅಧ್ಯವಸಾಯ ಮುಂದುವರಿಯಲಿ!” ಎಂದು ಬರೆಯಲಾಗಿದೆ.

ಆಡಳಿತ ಮಂಡಳಿ ತಕ್ಷಣ ಈ ಬರಹವನ್ನು ಅಳಿಸಿ ಹಾಕಲು ಸೂಚಿಸಿತು. ಆದರೂ ದೇಶ ವಿರೋಧಿ ಚಟುವಟಿಕೆಗಳಿಗೆ ವಿವಿ ಆಗಾಗ ವೇದಿಕೆಯಾಗುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ