ಆಂತರಿಕ ಕಚ್ಚಾಟದಲ್ಲಿ ತೊಡಗಿರುವ ಸಮಾಜವಾದಿ ಪಕ್ಷದಲ್ಲಿ ಎಲ್ಲವೂ ಸರಿಯಾಗುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಪಕ್ಷದ ವರಿಷ್ಠರು ತಂದೆ- ಮಗನಲ್ಲಿ ಸಂಧಾನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇಬ್ಬರು ಸೇರಿ 3 ಗಂಟೆಗಳ ಕಾಲ ರಹಸ್ಯ ಮಾತುಕತೆ ನಡೆಸಿದರೂ ಅದು ಭಿನ್ನಮತವನ್ನು ತೊಡೆದುಹಾಕುವಲ್ಲಿ ಯಾವುದೇ ಪ್ರಯೋಜನವನ್ನುಂಟು ಮಾಡಿಲ್ಲ ಎನ್ನಲಾಗುತ್ತಿದೆ.
ಮಾತುಕತೆ ಸಂದರ್ಭದಲ್ಲಿ ಮುಲಾಯಂ ಪಕ್ಷದ ಸ್ಥಾಪಕ ಅಧ್ಯಕ್ಷ ಮತ್ತು ಅಖಿಲೇಶ್ ರಾಷ್ಟ್ರಾದ್ಯಕ್ಷರಾಗಿ ಮುಂದುವರೆಯುವ ಕುರಿತು ಚರ್ಚಿಸಲಾಗಿದೆ ಆದರೆ ಎರಡು ಕಡೆಯವರು ಇದನ್ನು ಒಪ್ಪಲು ತಯಾರಿಲ್ಲ.
ತಂದೆ- ಮಗ ಇಬ್ಬರು ಸೇರಿಕೊಂಡು ಟಿಕೆಟ್ ವಿತರಿಸಲು ಮುಲಾಯಂ ಒಪ್ಪಿದ್ದಾರೆ. ಈ ಪ್ರಕ್ರಿಯೆಯಲ್ಲಿ ಶಿವಪಾಲ್ ಮಧ್ಯಪ್ರವೇಶಿಸಬಾರೆಂದು ತೀರ್ಮಾನವಾಗಿದೆ ಎಂದು ಹೇಳಲಾಗುತ್ತಿದೆ.
ಜತೆಗೆ ಅಮರ್ ಸಿಂಗ್ ಅವರನ್ನು ಉಚ್ಚಾಟಿಸಬೇಕು ಎಂದು ಅಖಿಲೇಶ್ ಹಠ ಹಿಡಿದಿದ್ದು, ಇದಕ್ಕೆ ಪ್ರತಿಯಾಗಿ ಮುಲಾಯಂ, ರಾಮಗೋಪಾಲ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.