ಭಾರತಕ್ಕೆ ಅಲ್ ಕಯಿದಾ ಎಚ್ಚರಿಕೆ

ಮಂಗಳವಾರ, 27 ಜೂನ್ 2017 (12:37 IST)
ನವದೆಹಲಿ:ನೀವು ಕಾಶ್ಮೀರದಲ್ಲಿ ಹರಿಸುತ್ತಿರುವ ನಮ್ಮ ಸಹೋದರರ ರಕ್ತಕ್ಕೆ ಪ್ರತೀಕಾರವಾಗಿ ನಾವು ಭಾರತೀಯ ಭದ್ರತಾ ರಚನೆಗಳನ್ನು ಹಾಗೂ ಹಿಂದೂ ಪ್ರತ್ಯೇಕತಾ ಸಂಘಟನೆಗಳ ನಾಯಕರನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಅಲ್‌ ಕಾಯಿದಾ ಭಾರತಕ್ಕೆ ಎಚ್ಚರಿಕೆ ನೀಡಿದೆ.
 
ಅಲ್‌ ಕಾಯಿದಾ ಉಗ್ರ ಸಂಘಟನೆ ಈ ಸಂಬಂಧ ವಿಸ್ತೃತ ದಾಖಲೆಯೊಂದನ್ನು ಹೊರಡಿಸಿದೆ. ಅದರಲ್ಲಿ ಭಾರತೀಯ ಉಪಖಂಡದಲ್ಲಿನ ಮುಜಾಹಿದೀನ್‌ಗಳು ಅನುಸರಿಸಬೇಕಾದ ನೀತಿ ಸಂಹಿತೆಯನ್ನು ವಿವರಿಸಿದೆ ಮಾತ್ರವಲ್ಲ ಭಾರತದಲ್ಲಿನ ತನ್ನ ಉಗ್ರ ಅಭಿಯಾನ ಮತ್ತು ಭವಿಷ್ಯದ ಗುರಿಗಳನ್ನು ಅದು ವಿವರಿಸಿದೆ.
 
ಅಲ್ಲದೇ ತನ್ನ ಸದಸ್ಯರು ಹಾಗೂ ತನ್ನೊಂದಿಗೆ ಸಂಯೋಜಿತರಾದವರು ಮಾಡಬೇಕಾದ ಮತ್ತು ಮಾಡಬಾರದ ಸಂಗತಿಗಳನ್ನು ದಾಖಲೆಯಲ್ಲಿ ಸ್ಪಷ್ಟಪಡಿಸಿದೆ. ಅಲ್ಲದೇ ಉತ್ತರ ಪ್ರದೇಶದ ಸಂಭಾಲ್‌ ನಲ್ಲಿನ ಮೌಲಾನಾ ಆಸೀಮ್‌ ಉಮರ್‌ ನನ್ನು ಭಾರತೀಯ ಉಪಖಂಡದ ಅಲ್‌ ಕಾಯಿದಾ ಮುಖ್ಯಸ್ಥ ’ಅಮೀರ್‌’ ಎಂದು ಘೋಷಿಸಿದೆ.
 

ವೆಬ್ದುನಿಯಾವನ್ನು ಓದಿ