ಮೋದಿಗೆ ಮತ್ತೊಬ್ಬ ರೈತನಿಂದ ಟ್ವೀಟ್

ಮಂಗಳವಾರ, 27 ನವೆಂಬರ್ 2018 (09:26 IST)
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತ್ತೀಚೆಗೆ ಬಾಗಲಕೋಟೆಯ ರೈತನೊಬ್ಬ ಈರುಳ್ಳಿ ದರ ಕುಸಿತವಾದ ಹಿನ್ನಲೆಯಲ್ಲಿ ಟ್ವಿಟ್ ಮಾಡಿದ್ದರು. ಅದೇರೀತಿ ಇದೀಗ  ಮತ್ತೊಬ್ಬ  ರೈತ ಮೋದಿಗೆ  ಟ್ವೀಟ್ ಮಾಡಿ ಮನವಿವೊಂದನ್ನು ಮಾಡಿದ್ದಾರೆ.

ರೈತ ಗಿರೀಶ್ ಪಾಟೀಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುರಿತು ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕಾಲುವೆ ಕೊನೆ ಹಳ್ಳಿಗಳಿಗೆ ನೀರು ಹರಿಸುವಂತೆ ಸರ್ಕಾರಕ್ಕೆ ಮಾರ್ಗದರ್ಶನ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

 

ರೈತ ಗಿರೀಶ್ ಪಾಟೀಲ್ ನವೆಂಬರ್ 13ಕ್ಕೆ ಮೋದಿಗೆ ಅಂಚೆ ಮೂಲಕ ಈ ಕುರಿತು ಪತ್ರ ಬರೆದಿದ್ದಾರೆ. ಪತ್ರಕ್ಕೆ ಸ್ಪಂದನೆ  ಸಿಗದ ಹಿನ್ನಲೆಯಲ್ಲಿ ಅವರು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ