"ಭಾರತ ಸೀಮಿತ ದಾಳಿಯನ್ನು ನಡೆಸಿದ ಬಳಿಕವೂ ಪಾಕಿಸ್ತಾನ ಏನನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಾವು ಸೀಮಿತ ದಾಳಿ ನಡೆಸಿದ ಬೆನ್ನಲ್ಲಿ ಸುಮಾರು 30 ಬಾರಿ ಕದನ ವಿರಾಮ ಉಲ್ಲಂಘಿಸಲಾಗಿದೆ. ದಿನನಿತ್ಯವೆಂಬಂತೆ ಇದು ನಡೆಯುತ್ತಿದೆ. ಪಾಕ್ ಮೇಲೆ ಅಂತರಾಷ್ಟ್ರೀಯ ಒತ್ತಡವಿದ್ದರೂ ನಮ್ಮ ಸೈನಿಕರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಪಾಕ್ ವಿರುದ್ಧ ಭಾರತ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ", ಎಂದು ಶಿವಸೇನಾ ನಾಯಕಿ ಮನೀಷಾ ಕಯಾಂಡೆ ಗುಡುಗಿದ್ದಾರೆ.
"ನಾವು ಮತ್ತೊಮ್ಮೆ ಸೀಮಿತ ದಾಳಿ ನಡೆಸುವ ಕುರಿತು ಆಲೋಚಿಸುವ ಅಗತ್ಯವಿದೆ. ಭಯೋತ್ಪಾದಕರು ಮತ್ತು ಪಾಕಿಸ್ತಾನಿ ಸೇನೆ ಜಂಟಿಯಾಗಿ ಭಾರತದ ಮೇಲೆ ದಾಳಿ ನಡೆಸಲು ತಯಾರಿ ನಡೆಸುತ್ತಿದ್ದಾರೆ ಎನ್ನಿಸುತ್ತಿದೆ," ಎಂದವರು ಆತಂಕ ವ್ಯಕ್ತ ಪಡಿಸಿದ್ದಾರೆ.