ಪಠಾಣ್ಕೋಟ್ನ ಶಿವನಗರ್ದ ನಿವಾಸಿ ರಮಣದೀಪ್ ಸಿಂಗ್ ಎಂಬ 15 ವರ್ಷದ ಬಾಲಕ, ಮನೆಯಲ್ಲಿದ್ದ ಲೋಡ್ ಆಗಿದ್ದ ಗನ್ ಎತ್ತಿಕೊಂಡು ಸೆಲ್ಫಿ ಕ್ಲಿಕ್ಕಿಸಲು ಹೋಗಿದ್ದಾನೆ. ಈ ವೇಳೆ ಅರಿವಿಲ್ಲದೇ ರಿವಾಲ್ವರ್ ಟ್ರಿಗರ್ನ್ನು ಒತ್ತಿ ಬಿಟ್ಟಿದ್ದಾನೆ. ಪರಿಣಾಮ, ರಮಣದೀಪ್ ತಲೆಗೆ ಗುಂಡು ತಗುಲಿದ್ದು ಗಂಭೀರವಾಗಿ ಗಾಯಗೊಂಡ ಆತನನ್ನು ಲೂಧಿಯಾನಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.