ಉದ್ಭವ್ ಠಾಕ್ರೆ ಹಿರಿಯ ಸಹೋದರನಿದ್ದಂತೆ: ಮಹಾರಾಷ್ಟ್ರ ಸಿಎಂ

ಬುಧವಾರ, 27 ಜುಲೈ 2016 (18:14 IST)
ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ನನಗೆ ಹಿರಿಯ ಸಹೋದರನಿದ್ದಂತೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
 
ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಜನ್ಮದಿನಾಚರಣೆ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿದ ಸಿಎಂ ಫಡ್ನವೀಸ್, ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಎದುರಾಗಿರುವ ಸಂಕಷ್ಟಗಳನ್ನು ದೂರಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಬಿಜೆಪಿಯೊಂದಿಗಿನ 25 ವರ್ಷಗಳ ಮೈತ್ರಿ ವ್ಯರ್ಥವಾಯಿತು ಎಂದು ಉದ್ಭವ್ ಠಾಕ್ರೆ ಶಿವಸೇನೆ ಮುಖವಾಣಿ ಸಾಮ್ನಾಗೆ ಸಂದರ್ಶನದಲ್ಲಿ ಹೇಳಿಕೆ ನೀಡಿದ ಮಾರನೇ ದಿನವೇ ಫಡ್ನವೀಸ್ ಅಭಿನಂಧನೆ ಹೊರಬಿದ್ದಿದೆ.
 
ಉದ್ಭವ್ ಠಾಕ್ರೆ ವಿಶಾಲ ಮನೋಭಾವವುಳ್ಳ ಗೆಳೆಯರಾಗಿದ್ದು, ಗೆಳೆತನದಲ್ಲಿ ನಾವು ಪ್ರತಿಯೊಂದನ್ನು ಹಂಚಿಕೊಳ್ಳುತ್ತೇವೆ. ಬಾಳಾಸಾಹೇಬ್‌ ಅಥವಾ ಉದ್ಭವ್ ಠಾಕ್ರೆಯೊಂದಿಗೆ ಕೌಟಂಬಿಕ ಸಂಬಂಧವಿದೆ ಎಂದು ತಿಳಿಸಿದ್ದಾರೆ.
 
ಉದ್ಭವ್ ಠಾಕ್ರೆ ಯೋಚನಾಲಹರಿ ಬೇರೆ ಬೇರೆ ರೀತಿಯಾಗಿದ್ದರೂ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದಾಗ ಅದನ್ನು ಶಾಂತ ಚಿತ್ತದಿಂದ ಆಲಿಸುವ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಸಿಎಂ ದೇವೇಂದ್ರ ಫಡ್ನವೀಸ್ ಹೊಗಳಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ