ತಂಬಾಕು ಜಗಿದು ಸಿಕ್ಕಿಬಿದ್ದ ಸಿಎಂ ಯೋಗಿ ಕಾರು ಚಾಲಕ!

ಭಾನುವಾರ, 2 ಏಪ್ರಿಲ್ 2017 (10:11 IST)
ಲಕ್ನೋ: ರಾಜ್ಯ ಸಚಿವಾಲಯದ ಎದುರು ತಂಬಾಕು ಜಗಿದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಾರು ಚಾಲಕ 500 ರೂ. ದಂಡ ತೆತ್ತ ಘಟನೆ ನಡೆದಿದೆ.

 

ಕರ್ತವ್ಯದಲ್ಲಿರುವಾಗಲೇ ತಂಬಾಕು ಜಗಿದು ಈತ ಸಿಕ್ಕಿಬಿದ್ದಿದ್ದಾನೆ. ವಿಶೇಷವೆಂದರೆ ಸಿಎಂ ಯೋಗಿ ಅವರೇ ಅಧಿಕಾರ ಸ್ವೀಕರಿಸಿದ ಮೇಲೆ ಸರ್ಕಾರಿ ಅಧಿಕಾರಿಗಳು ಮತ್ತು ಸಹಾಯಕರು ಕರ್ತವ್ಯದಲ್ಲಿರುವಾಗ ಸರ್ಕಾರಿ ಸ್ಥಳಗಳಲ್ಲಿ ತಂಬಾಕು ಜಗಿಯುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು.

 
ಅಧಿಕಾರಿಗಳು ಮತ್ತು ಸರ್ಕಾರಿ ಸೇವೆಯಲ್ಲಿರುವವರು ಶುಚಿತ್ವ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಸಿಎಂ ಇಂತಹದ್ದೊಂದು ನಿಯಮ ಜಾರಿಗೆ ತಂದಿದ್ದರು. ಇದೀಗ ಅವರ ಕಾರು ಚಾಲಕನೇ ಸಿಕ್ಕಿಬಿದ್ದು ದಂಡ ತೆರುವಂತಾಗಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ