ಈ ಅರ್ಜಿಯನ್ನು ಭರ್ತಿ ಮಾಡಿ ಆಗಸ್ಟ್ 15ರೊಳಗೆ ಚಂದೀಘಡದಲ್ಲಿರುವ ಪಕ್ಷದ ಕಚೇರಿಗೆ ನೀಡಬೇಕು. ಅಲ್ಲಿಂದ ಅದನ್ನು ನವದೆಹಲಿಗೆ ಕಳುಹಿಸಲಾಗುವುದು. ಚುನಾವಣಾ ಕಣಕ್ಕಿಳಿದು, ಗೆಲ್ಲಲ್ಲು ಗಂಭೀರ ಪ್ರಯತ್ನ ನಡೆಸುವವರು ಅರ್ಜಿ ಸಲ್ಲಿಸಲಿ ಎಂಬುದು ನಮ್ಮ ಈ ನಿಯಮದ ಉದ್ದೇಶ. ಅವರ ಕ್ಷೇತ್ರದಲ್ಲಿ ಎಷ್ಟು ಮತಗಟ್ಟೆಗಳಿವೆ ಎಂಬುದನ್ನು ಸಹ ತಿಳಿಯದೇ, ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳದೇ ಸುಮ್ಮನೆ ಕಣಕ್ಕಿಳಿಯುವುದು ಎಷ್ಟರ ಮಟ್ಟಿಗೆ ಸೂಕ್ತ. ಹೀಗಾಗಿ ಈ ನಿಯಮ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.