ಬಿಜೆಪಿ ವಿರುದ್ಧ ಅಸಮಧಾನ ವ್ಯಕ್ತ ಪಡಿಸಿ ಹೊರಬಂದಿದ್ದ ಸಿಧು ಆಪ್ ಸೇರಲು ನಿರ್ಧರಿಸಿದ್ದರು ಮತ್ತು ಆಪ್ ಮುಂದೆ ಕೆಲವು ಶರತ್ತುಗಳನ್ನಿಟ್ಟಿದ್ದರು. ವರದಿಗಳ ಪ್ರಕಾರ ಕ್ರಿಕೆಟರ್ ಪರಿವರ್ತಿತ ರಾಜಕಾರಣಿ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ಹೆಸರು ಘೋಷಿಸಬೇಕು ಮತ್ತು ತಮ್ಮ ಪತ್ನಿ ನವಜೋತ್ ಕೌರ್ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಸೀಟು ನೀಡಬೇಕೆಂದು ಆಪ್ ನಾಯಕತ್ವದ ಮುಂದೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.ಆದರೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವುದಕ್ಕೆ ಆಪ್ ಖಡಾಖಂಡಿತವಾಗಿ ನಿರಾಕರಿಸಿತ್ತು.
ಪ್ರಸ್ತುತ ಅಮೃತಸರ್ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಕೈಯ್ಯಲ್ಲಿದೆ.
ತಮ್ಮ ಆಹ್ವಾನಕ್ಕೆ ಒಪ್ಪಿದರೆ ಸಿಧು ಚರ್ಚೆಗೆ ಬರಲಿ. ಆ ಬಳಿಕ ಎಲ್ಲವನ್ನು ನಿರ್ಧರಿಸಲು ಸಾಧ್ಯ ಎಂದು ಕಾಂಗ್ರೆಸ್ ಹೇಳಿದೆ.