ದರ್ರಾಂಗ್ (ಅಸ್ಸಾಂ): ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕಾಂಗ್ರೆಸ್ ಪಕ್ಷದ ಮೇಲೆ ಬಿರುಸಿನ ದಾಳಿ ನಡೆಸಿದರು. ಆಪರೇಷನ್ ಸಿಂಧೂರ್ ಸಮಯದಲ್ಲಿ ಕಾಂಗ್ರೆಸ್ ಪಕ್ಷ, ಭಾರತೀಯ ಸೇನೆಯ ಪರ ನಿಲ್ಲುವ ಬದಲು ಪಾಕಿಸ್ತಾನದ ಸೇನೆ ಪರವಾಗಿ ನಿಂತಿತ್ತು ಎಂದು ಗುಡುಗಿದ್ದಾರೆ.
ಅಸ್ಸಾಂನ ದರ್ರಾಂಗ್ನಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು , "ಕಾಂಗ್ರೆಸ್ ತನ್ನ ರಾಜಕೀಯಕ್ಕಾಗಿ, ಭಾರತಕ್ಕೆ ವಿರುದ್ಧವಾದ ಇಂತಹ ಸಿದ್ಧಾಂತದೊಂದಿಗೆ ಸಹಭಾಗಿತ್ವದಲ್ಲಿದೆ. ಆಪರೇಷನ್ ಸಿಂಧೂರ್ನಲ್ಲಿಯೂ ಇದು ಕಂಡುಬಂದಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಡೀ ದೇಶವು ಭಯೋತ್ಪಾದನೆಯಿಂದ ರಕ್ತಸ್ರಾವವಾಗುತ್ತಿತ್ತು, ಮತ್ತು ಕಾಂಗ್ರೆಸ್ ಮೌನವಾಗಿ ನಿಂತಿತ್ತು. ಪಾಕಿಸ್ತಾನದ ಮೂಲೆ ಮೂಲೆಯಲ್ಲಿ ನಮ್ಮ ಸೇನೆಯ ನಾಯಕರು ಪಾಕಿಸ್ತಾನದ ಸೈನ್ಯವನ್ನು ನಾಶಪಡಿಸಿದರು, ಆದರೆ ಕಾಂಗ್ರೆಸ್ ಮಾತ್ರ ಪಾಕಿಸ್ತಾನದ ಸೇನೆಯೊಂದಿಗೆ ನಿಂತಿತು ಎಂದರು.
ಕಾಂಗ್ರೆಸ್ ತನ್ನ "ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ಮತ ಬ್ಯಾಂಕ್" ಗೆ ಆದ್ಯತೆ ನೀಡುತ್ತದೆ ಎಂದು ಪ್ರತಿಪಾದಿಸಿದ ಪ್ರಧಾನಿ ಮೋದಿ, ವಿರೋಧ ಪಕ್ಷವು ಒಳನುಸುಳುಕೋರರು ಮತ್ತು ದೇಶ ವಿರೋಧಿಗಳಿಗೆ ಲಾಭದಾಯಕವಾದ ಅಜೆಂಡಾಗಳನ್ನು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ನುಸುಳುಕೋರರು ಮತ್ತು ದೇಶ ವಿರೋಧಿ ಶಕ್ತಿಗಳನ್ನು ರಕ್ಷಿಸುತ್ತದೆ ಎಂದು ಅವರು ಆರೋಪಿಸಿದರು.