ಕಾಂಗ್ರೆಸ್ ಪ್ರಣಾಳಿಕೆಯಲ್ಲಿದೆ ವಿವಾದ ಹುಟ್ಟುಹಾಕಬಲ್ಲ ಅಂಶಗಳು!

ಶುಕ್ರವಾರ, 27 ಏಪ್ರಿಲ್ 2018 (10:55 IST)
ಮಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಹೊರತಂದಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.

ಕರ್ನಾಟಕದ ಹೆಮ್ಮೆ, ಕಾಂಗ್ರೆಸ್ ಮತ್ತೊಮ್ಮೆ ಹೆಸರಿನ ಪ್ರಣಾಳಿಕೆಯನ್ನು ಮಂಗಳೂರಿನ ಟಿಎಂಎ ಪೈ ಹಾಲ್ ನಲ್ಲಿ ರಾಹುಲ್ ಗಾಂಧಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇದು ಕರ್ನಾಟಕದ ಜನರ ಭಾವನೆ, ಅಭಿಪ್ರಾಯ ಸಂಗ್ರಹಿಸಿ, ಸಾಕಷ್ಟು ಅಧ್ಯಯನ ನಡೆಸಿ ತಯಾರಿಸಿರುವ ಪ್ರಣಾಳಿಕೆ ಎಂದಿದ್ದಾರೆ.

ಪ್ರಣಾಳಿಕೆಯಲ್ಲಿ ಹಲವು ವಿವಾದಕ್ಕೆ ಕಾರಣವಾಗಬಲ್ಲ ಅಂಶಗಳಿವೆ. ಪಕೋಡಾ ಮಾರು ಅಂದವರಾ? ಉದ್ಯೋಗ ಕೊಟ್ಟವರಾ? ಪ್ರಗತಿ ಪರ ಸಿದ್ಧ ಸರ್ಕಾರ? ಕೋಮುವಾದಿ ಚಡ್ಡಿ ಸರ್ಕಾರ? ಎಂಬತಂಹ ವಿವಾದಾತ್ಮಕ ಹೇಳಿಕೆಗಳು ಪ್ರಣಾಳಿಕೆಯಲ್ಲಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ