ಸುಪ್ರೀಂಕೋರ್ಟ್ ಅಸಮಾಧಾನಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ ಗೋವುಗಳ ಮಾರಾಟ ಮತ್ತು ಸರಬರಾಜು ಕುರಿತು ಕೆಲ ತಿದ್ದುಪಡಿಗಳನ್ನ ಮಾಡಿ ಆಗಸ್ಟ್`ನಲ್ಲಿ ಮರು ಅಧಿಸೂಚಬೆ ಹೊರಡಿಸುವುದಾಗಿ ಹೇಳಿದೆ. ಈ ಅಧಿಸೂಚನೆ ಬಗ್ಗೆ ರಾಜ್ಯಗಳು ಎತ್ತಿರುವ ಆಕ್ಷೇಪಣೆಗಳನ್ನ ಹೊಸ ಅಧಿಸೂಚನೆ ವೇಲೆ ಪರಿಗಣಿಸಲಾಗುವುದು ಎಂದು ಕೇಂದ್ರ ತಿಳಿಸಿದೆ.
ಇತ್ತೀಚೆಗೆ, ಕೇಂದ್ರ ಸರ್ಕಾರ ಗೋಹತ್ಯೆ ಮತ್ತು ಗೋವುಗಳ ಸರಬರಾಜನ್ನ ನಿಷೇಧಿಸಿ ಅಧಿಸೂಚನೆ ಹೊರಡಿಸಿತ್ತು. ಕೃಷಿ ಉಪಯೋಗ ಮತ್ತು ಹಾಲಿಗಾಗಿ ಸಾಕಾಣಿಕೆಗೆ ಮಾತ್ರ ಹಸುಗಳನ್ನ ಮಾರಾಟ ಮಾಡಬೇಕು. ವ್ಯವಹಾರದ ದಾಖಲೆ ಇಟ್ಟಿರಬೇಕು. ಅಕ್ರಮ ಸಾಗಾಟಕ್ಕೆ ಜೈಲುಶಿಕ್ಷೆಯಂತಹ ಕಠಿಣ ಕಾನೂನು ಇದರಲ್ಲಿತ್ತು.