‘ನೀವೇ ಅಧ್ಯಕ್ಷರಾಗಬೇಕು’ ದೆಹಲಿ ಕಾಂಗ್ರೆಸ್ಸಿಗರಿಂದ ರಾಹುಲ್ ಗೆ ಒತ್ತಾಯ

ಭಾನುವಾರ, 8 ಅಕ್ಟೋಬರ್ 2017 (08:30 IST)
ನವದೆಹಲಿ: ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿ ತಕ್ಷಣವೇ  ಪಕ್ಷದ ಅಧ್ಯಕ್ಷರಾಗಬೇಕೆಂದು ಆಗ್ರಹಿಸಿ ದೆಹಲಿ ಕಾಂಗ್ರೆಸ್ ನಿರ್ಣಯವೊಂದನ್ನು ಮಂಡಿಸಿದೆ.

 
ದೆಹಲಿಗೆ ಕಾಂಗ್ರೆಸ್ ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಸದಸ್ಯರು ಈ ಒತ್ತಾಯ ಮಾಡಿದ್ದಾರೆ. ರಾಹುಲ್ ಶೀಘ್ರದಲ್ಲೇ ಪಕ್ಷದ ಚುಕ್ಕಾಣಿ ಹಿಡಿಯಬೇಕೆಂದು ಕಾಂಗ್ರೆಸ್ ನ ಹಲವು ನಾಯಕರು ಒತ್ತಾಯಿಸುತ್ತಿರುವ ಬೆನ್ನಲ್ಲೇ ದೆಹಲಿ ಕಾಂಗ್ರೆಸ್ ಈ ನಿರ್ಣಯ ಕೈಗೊಂಡಿದೆ.

ವಿಶೇಷವೆಂದರೆ ಈ ನಿರ್ಣಯ ಕೈಗೊಂಡ ಸಭೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವ ವಹಿಸಿದ್ದರು. ಮುಂಬರುವ ಲೋಕಸಭೆ ಚುನಾವಣೆಗೆ ಮೊದಲು ಪಕ್ಷವನ್ನು ಸಜ್ಜುಗೊಳಿಸಲು ಶೀಘ್ರದಲ್ಲೇ ರಾಹುಲ್ ಅಧ್ಯಕ್ಷ ಸ್ಥಾನಕ್ಕೇರುವ ಬಗ್ಗೆ ಕಾಂಗ್ರೆಸ್ ಮೂಲಗಳಿಂದ ಒತ್ತಾಯ ಹೆಚ್ಚುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ