ವೃಂದಾವನದಲ್ಲಿ ಆಶ್ರಮದ ಮುಖ್ಯಸ್ಥನಿಂದ ಮಹಿಳೆ ಮೇಲೆ ಅತ್ಯಾಚಾರ

ಶನಿವಾರ, 5 ನವೆಂಬರ್ 2016 (16:56 IST)
ವಿವಾಹಿತ ಮಹಿಳೆಯ ಮೇಲೆ ಆಶ್ರಮದ ಮುಖ್ಯಸ್ಥನೇ ಅತ್ಯಾಚಾರವೆಸಗಿದ ಹೇಯ ಘಟನೆ ಮಥುರಾದ ವೃಂದಾವನದಲ್ಲಿ ನಡೆದಿದೆ. 
 
ಜುಲೈ 28 ರಂದು ಮಹಿಳೆ ತನ್ನ ಪತಿ ಜತೆ ಬೃಂದಾವನದಲ್ಲಿರುವ ವಿಪಿನ್ ಮಹಾರಾಜ್ ಗುರುಗಳ ರಾಸ್ ಬಿಹಾರಿ ಟ್ರಸ್ಟ್ ಚಾರಿಟೇಬಲ್ ಆಶ್ರಮಕ್ಕೆ ಭೇಟಿ ನೀಡಿದ್ದಳು. ಆ ಸಂದರ್ಭದಲ್ಲಿ ಆಕೆಯ ಮೇಲೆ ಅತ್ಯಾಚಾರವಾಗಿದ್ದು ವೃಂದಾವನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
ನಿಜಕ್ಕೂ ನಡೆದಿದ್ದೇನು?
 
ಪೊಲೀಸರು ಹೇಳುವ ಪ್ರಕಾರ, ಜುಲೈ 28 ರಂದು ಮಹಿಳೆ ವಿಪಿನ್ ಮಹಾರಾಜ್ ಅವರನ್ನು ಭೇಟಿಯಾಗಲು ಬಂದಿದ್ದಳು. ಆ ಸಮಯದಲ್ಲಿ ಕೆಲವೊಂದು ಸಾಮಗ್ರಿ ತರುವ ನೆಪದಲ್ಲಿ ಮಹಿಳೆಯ ಗಂಡನನ್ನು ಹತ್ತಿರದ ಮಾರುಕಟ್ಟೆಗೆ ಕಳುಹಿಸಿದ ಆಶ್ರಮದ ಮುಖ್ಯಸ್ಥ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
 
ತಾನೆಸಗಿದ ಕೃತ್ಯವನ್ನು ಯಾರ ಬಳಿಯಾದರೂ ಬಾಯ್ಬಿಟ್ಟರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಆತ ಬೆದರಿಕೆ ಸಹ ಒಡ್ಡಿದ್ದ. ಹೀಗಾಗಿ ದೆಹಲಿ ತಲುಪಿದ ಬಳಿಕ ಪತಿಯ ಬಳಿ ಆಕೆ ನಡೆದ ಸಂಗತಿಯನ್ನು ಹೇಳಿಕೊಂಡಿದ್ದಾಳೆ. 
 
ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಪೊಲೀಸರು ಮಹಿಳೆಯ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ವೆಬ್ದುನಿಯಾವನ್ನು ಓದಿ