ಮುಂಬೈ ದಾಳಿಯಲ್ಲಿ ಮಡಿದವರಿಗಾಗಿ ಶೃದ್ಧಾಂಜಲಿ ಕಾರ್ಯಕ್ರಮ

ಶನಿವಾರ, 26 ನವೆಂಬರ್ 2016 (12:11 IST)
ಮುಂಬೈ ಮಹಾನಗರದ ಮೇಲೆ 8 ವರ್ಷಗಳ ಹಿಂದೆ ಇದೇ ದಿನದಂದು ಉಗ್ರರ ಕರಿನೆರಳು ಬಿದ್ದಿತ್ತು. ಹೇಡಿ ಪಾಕಿಸ್ತಾನದ ಉಗ್ರರ ಕೃತ್ಯಕ್ಕೆ 166 ಅಮಾಯಕ ಜನರು ಬಲಿಯಾದರು. ದುರಂತದಲ್ಲಿ ಬಲಿಯಾದ ಅಪ್ರತಿಮ ವೀರ ಸೈನಿಕರು ಮತ್ತು ಜನರನ್ನು ನೆನೆಯಲಾಯಿತು.  
ನಗರದಲ್ಲಿ ಆಯೋಜಿಸಲಾದ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ರಾಜ್ಯಪಾಲ ಸಿ.ವಿ. ರಾವ್ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ , ಡಿಜಿಪಿ ಸತೀಶ್ ಮಾಥೂರ್, ಮುಂಬೈ ಪೊಲೀಸ್ ಆಯುಕ್ತ ದತ್ತಾ ಪಡ್ಸಲ್ಗೀಕರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
 
ಕಳೆದ 2008ರ ನವೆಂಬರ್ 26 ರಂದು ಮಹಾನಗರಿಗೆ ಆಗಮಿಸಿದ್ದ ಉಗ್ರರು ಮನಬಂದಂತೆ ದಾಳಿ ನಡೆಸಿ 166ಕ್ಕೂ ಹೆಚ್ಚು ಜನರನ್ನು ಹತ್ಯೆಗೈದಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ