ನಟ ದೀಪ್ ಸಿಂಗ್ ವಿರುದ್ಧ ಕೊನೆಗೂ ಎಫ್ ಐಆರ್

ಗುರುವಾರ, 28 ಜನವರಿ 2021 (11:30 IST)
ನವದೆಹಲಿ: ದೆಹಲಿಯಲ್ಲಿ ರೈತ ಪ್ರತಿಭಟನೆಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ನಟ, ಸಾಮಾಜಿಕ ಕಾರ್ಯಕರ್ತ ದೀಪ್ ಸಿಂಗ್ ಮೇಲೆ ಕೊನೆಗೂ ಎಫ್ ಐಆರ್ ದಾಖಲಾಗಿದೆ.


ದೀಪ್ ಸಿಂಗ್ ದೆಹಲಿಯ ಕೆಂಪುಕೋಟೆಯಲ್ಲಿ ಬಾವುಟ ಕಿತ್ತು ಹಾಕಿ ಸಿಖ್ಖರ ಧ್ವಜವೇರಿಸಲು ಪ್ರಚೋದನೆ ನೀಡಿದ್ದರು ಎಂದು ಆರೋಪಗಳಿತ್ತು. ಈ ಬಗ್ಗೆ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದ ಅವರು ತಮ್ಮ ಮೇಲಿನ ಆರೋಪ ನಿರಾಕರಿಸಿದ್ದರು. ಆದರೆ ಅವರ ವಿರುದ್ಧ ವಿಡಿಯೋ ಸಾಕ್ಷ್ಯಗಳು ದೊರೆತಿರುವ ಹಿನ್ನಲೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ