ನ್ಯಾಯ ಕೊಡಿಸಿ ಇಲ್ಲವೇ; ದಯಾಮರಣ ಪಾಲಿಸಿ: ಸಿಎಂ ಯೋಗಿಗೆ ಅತ್ಯಾಚಾರ ಸಂತ್ರಸ್ತೆಯ ಟ್ವೀಟ್

ಮಂಗಳವಾರ, 11 ಜುಲೈ 2017 (07:08 IST)
ಲಖನೌ: ಗ್ಯಾಂಗ್ ರೇಪ್ ಗೊಳಗಾದ ಸಂತ್ರಸ್ತ ಯುವತಿಯೊಬ್ಬರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಟ್ವೀಟ್ ಮಾಡಿ, ಅಪರಾಧಿಗಳನ್ನು ಇನ್ನೂ ಶಿಕ್ಷಿಸದೇ ಬಿಟ್ಟಿರುವುದನ್ನು ಪ್ರಶ್ನಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
 
ಕ್ಷಣ ಕ್ಷಣಕ್ಕೂ ನಾನು ನರಕ ಅನುಭವಿಸುತ್ತಿದ್ದೇನೆ. ನನ್ನ ಮೇಲೆ ಅತ್ಯಾಚಾರ ಮಾಡಿದವರು ಮಾತ್ರ ಹಾಯಾಗಿ ಓದಾಡಿಕೊಂಡಿದ್ದಾರೆ. ನನ್ನ ಮೇಲೆ ಈ ವರ್ಷ ಮೇ 2ರಂದು ಗ್ಯಾಂಗ್ ರೇಪ್ ನಡೆಯಿತು. ಇದುವರೆಗೂ ತಪ್ಪಿತಸ್ಥರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ದಯವಿಟ್ಟು ನನಗೆ ನ್ಯಾಯಕೊಡಿಸಿ ಅಥವಾ ದಯಾ ಮರಣ ಪಾಲಿಸಿ ಎಂದು ಸಂತ್ರಸ್ತೆ ತನ್ನ ನೋವನ್ನು ತೋಡಿಕೊಂಡಿದ್ದಾರೆ.
 
ಇನ್ನು ಈ ಟ್ವೀಟ್ ನಲ್ಲಿ ಪೊಲೀಸರಿಗೆ ನೀಡಿದ ದೂರು, ರಾಷ್ಟ್ರೀಯ ಎಸ್ ಸಿ, ಎಸ್ ಟಿ ಆಯೋಗಕ್ಕೆ ನೀಡಿದ ದೂರಿನ ಪ್ರತಿಗಳನ್ನೂ ಸಹ ಹಾಕಿದ್ದಾರೆ. ಇದರ ಜತೆಗೆ ರಾಜ್ಯದ ಡಿಜಿಪಿ ಸುಲ್ಖಾನ್ ಸಿಂಗ್ ಹಾಗೂ ಆಗ್ರಾ ಪೊಲೀಸರಿಗೂ ಟ್ಯಾಗ್ ಮಾಡಿದ್ದಾರೆ.
 

ವೆಬ್ದುನಿಯಾವನ್ನು ಓದಿ