ಕೇಂದ್ರ ಸರ್ಕಾರದ ಮೇಲೆ ಕಿಡಿಕಾರಿದ ಅವರು, ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಚುನಾವಣಾ ಸಮಯದಲ್ಲಿ ನೀಡಿದ್ದ ವಾಗ್ದಾನಗಳನ್ನು ಈಡೇರಿಸಲು ವಿಫಲವಾಗಿದೆ. ಆದರೆ ಆಪ್ ಸರ್ಕಾರ ಉತ್ತಮ ಆಡಳಿತಕ್ಕೆ ಉದಾಹರಣೆ ಎನ್ನಿಸಿಕೊಂಡಿದೆ. ತಮ್ಮ ವಿಫಲತೆಯಿಂದ ಮಾಧ್ಯಮಗಳ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ಕುತಂತ್ರವನ್ನು ನಡೆಸುತ್ತಿದೆ. ಇದರ ಭಾಗವಾಗಿಯೇ ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ನನ್ನ ನಿರಪರಾಧಿತ್ವವನ್ನು ಸಾಬೀತು ಪಡಿಸಲು ವಿಡಿಯೋ ಸಾಕ್ಷ್ಯ ನನ್ನ ಬಳಿ ಇದೆ. ನ್ಯಾಯಾಲಯದಲ್ಲಿ ನಾನದನ್ನು ಪ್ರಸ್ತುತ ಪಡಿಸುತ್ತೇನೆ. ಅದು ನನ್ನ ವಿರುದ್ಧದ ರಾಜಕೀಯ ಪಿತೂರಿಯನ್ನು ಬಹಿರಂಗ ಪಡಿಸಲಿದೆ ಎಂದು ಶಾಸಕರು ಹೇಳಿದ್ದಾರೆ.