ಪ್ರಧಾನಿ ಮೋದಿ ಲಂಚ ಸ್ವೀಕರಿಸಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಿದೆ : ಅರವಿಂದ್ ಕೇಜ್ರಿವಾಲ್

ಗುರುವಾರ, 17 ನವೆಂಬರ್ 2016 (18:41 IST)
ಆದಿತ್ಯ ಬಿರ್ಲಾ ಸಂಸ್ಥೆಯಿಂದ ಪ್ರಧಾನಿ ಮೋದಿ ದಾಖಲೆಯಿಲ್ಲದೇ  ಹಣ ಸ್ವೀಕರಿಸಿದ್ದಾರೆ ಎನ್ನುವುದಕ್ಕೆ ನನ್ನ ಬಳಿ ದಾಖಲೆಗಳಿವೆ. ಅವರನ್ನು ದೇಶ ಯಾವತ್ತೂ ಕ್ಷಮಿಸುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
 
ದಾಖಲೆಗಳನ್ನಿಟ್ಟುಕೊಂಡು ಆರೋಪಗಳನ್ನು ಮಾಡುತ್ತಿದ್ದರೂ ಯಾರೂ ಕೂಡಾ ಯಾಕೆ ಮಾತನಾಡುತ್ತಿಲ್ಲ. ಭ್ರಷ್ಟಾಚಾರ ಕೇವಲ ವಿಪಕ್ಷಗಳು ಮಾಡುತ್ತಿವೆಯೇ ಎಂದು ಪ್ರಶ್ನಿಸಿದ್ದಾರೆ.
 
ಬೆರಳೆಣಿಕೆಯ ಧನಿಕರಿಗಿಂತ ಕೋಟ್ಯಾಂತರ ಬಡವರಿಗಾಗಿ ನಾವು ಹೋರಾಟ ಮಾಡುತ್ತೇವೆ. ಕೂಡಲೇ 500 ಮತ್ತು 1000 ರೂಪಾಯಿಗಳ ನಿಷೇಧವನ್ನು ಹಿಂಪಡೆಯಿರಿ ಇಲ್ಲವೇ ಹೋರಾಟವನ್ನು ಎದುರಿಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ