ನಾನು ಮಾತನಾಡಿದರೆ, ಸಂಪೂರ್ಣ ದೇಶವೇ ನಡುಗಬಹುದು ಎಂದು ಹೇಳುವುದರ ಮೂಲಕ ಭೃಷ್ಟಾಚಾರ ಆರೋಪದಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಹಾರಾಷ್ಟ್ರದ ಮಾಜಿ ಸಚಿವ, ಹಿರಿಯ ಬಿಜೆಪಿ ನಾಯಕ ಏಕನಾಥ ಖಡ್ಸೆ ವಿವಾದವೊಂದನ್ನು ಮೈಗೆಳೆದುಕೊಂಡಿದ್ದಾರೆ.
ಗುರುವಾರ ಸಂಜೆ ತವರು ಕ್ಷೇತ್ರ ಜಲಂಗಾವ್ನಲ್ಲಿ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನ್ನಾಡುತ್ತಿದ್ದ ಖಡ್ಸೆ, ನನ್ನ ವಿರುದ್ಧ ಆರೋಪ ಕೇಳಿ ಬರುತ್ತಿದ್ದಂತೆ ನಾನು ರಾಜೀನಾಮೆ ನೀಡಿರಬಹುದು. ಆದರೆ ಒಂದು ವೇಳೆ ನಾನು ಬಾಯಿ ತೆರೆದರೆ ಸಂಪೂರ್ಣ ದೇಶವೇ ನಡುಗಿ ಹೋಗಬಹುದು ಎಂದು ಹೇಳಿದ್ದಾರೆ.