ಸರ್ಜಿಕಲ್ ಸ್ಟ್ರೈಕ್ ಗೆ ಪ್ರೇರಣೆ ಏನು ಗೊತ್ತಾ..?: ಮಾಜಿ ರಕ್ಷಣಾ ಸಚಿವರು ಹೇಳಿದ್ದೇನು..?

ಶನಿವಾರ, 1 ಜುಲೈ 2017 (17:52 IST)
ಪಣಜಿ:ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗೆ ಸುದ್ದಿವಾಹಿನಿಯ ಆ್ಯಂಕರ್ ಒಬ್ಬರು ಕೇಳಿದ್ದ ಪ್ರಶ್ನೆ ಕಾರಣ ಎಂದು ಮಾಜಿ ರಕ್ಷಣಾ ಸಚಿವ, ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ತಿಳಿಸಿದ್ದಾರೆ.
 
ಪಣಜಿಯಲ್ಲಿ ನಡೆದ ಉದ್ಯಮಿಗಳ ಸಭೆಯಲ್ಲಿ ಮಾತನಾಡಿದ ಪರಿಕ್ಕರ್, ಸರ್ಜಿಕಲ್ ದಾಳಿಗೆ ಪ್ರೇರಣೆಯಾದ ಅಂಶವನ್ನು ಬಹಿರಂಗಗೊಳಿಸಿದ್ದಾರೆ. 2015ರಲ್ಲಿ ಮ್ಯಾನ್ಮಾರ್ ಗಡಿಯೊಳಗೆ ನುಗ್ಗಿ ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿ ಬಗ್ಗೆ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಟಿವಿ ಆ್ಯಂಕರ್ ಗೆ ಮಾಹಿತಿ ನೀಡುತ್ತಿದ್ದ ವೇಳೆ, ಮ್ಯಾನ್ಮಾರ್ ಗಡಿಯೊಳಗೆ ತೋರಿದ ಧೈರ್ಯ ನೆರೆಯ ದೇಶದ ಮೇಲೆ ತೋರಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನೆ ಮಾಡಿ ಅವಮಾನಿಸಿದ್ದರಂತೆ. ಆ್ಯಂಕರ್ ಆ ಪ್ರಶ್ನೆ ಕೇಳಿದ್ದ ದಿನವೇ ಪಿಒಕೆ ಮೇಲೆ ಸರ್ಜಿಕಲ್ ದಾಳಿ ನಡೆಸಲು ನಿರ್ಧರಿಸಿದ್ದೆ ಎಂದು ಪರ್ರೀಕರ್ ಹೇಳಿದ್ದಾರೆ.
 
2016ರ ಸೆಪ್ಟೆಂಬರ್ 29ರಂದು ಪಿಒಕೆಯಲ್ಲಿ ನಡೆಸಿದ ನಿರ್ದಿಷ್ಟ ದಾಳಿಗೆ ಆಗಲೇ ಪ್ರೇರಣೆ ದೊರೆತಿತ್ತು. ನಿರ್ದಿಷ್ಟ ದಾಳಿಗೆ 15 ತಿಂಗಳು ಮೊದಲೇ ಯೋಜನೆ ರೂ‍ಪಿಸಲಾಗಿತ್ತು ಎಂದು ಪರಿಕ್ಕರ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ