ಕರ್ನಾಟಕಕ್ಕೆ ಮಾತ್ರ ಹಿಂದಿ ಹೇರಿಕೆಯೇ; ಕೇಂದ್ರ ಸರ್ಕಾರದ ವಿರುದ್ಧ ಕನ್ನಡಿಗರ ಆಕ್ರೋಶ

ಸೋಮವಾರ, 15 ಫೆಬ್ರವರಿ 2021 (12:12 IST)
ಬೆಂಗಳೂರು : ಕರ್ನಾಟಕಕ್ಕೆ ಮಾತ್ರ ಹಿಂದಿ ಹೇರಿಕೆಯೇ? ತಮಿಳು, ಕೇರಳಕ್ಕೆ ದ್ವಿಭಾಷಾ ಸೂತ್ರ ಏಕಿಲ್ಲ? ಎಂದು ಕೇಂದ್ರ ಸರ್ಕಾರದ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೆನ್ನೈ ನಲ್ಲಿ ಫೆ.14ರಂದು ನಡೆದ ಸರ್ಕಾರದ ವಿವಿಧ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಆ ವೇಳೆ ಕಾರ್ಯಕ್ರಮದಲ್ಲಿ ತಮಿಳು ಭಾಷೆ ಬಳಸಲಾಗಿದೆ. ಹಾಗಾಗಿ ಚೆನ್ನೈ ಕಾರ್ಯಕ್ರಮ ತಮಿಳುಮಯವಾಗಿದೆ. ಕಾರ್ಯಕ್ರಮದಲ್ಲಿ ಹಿಂದಿ, ಇಂಗ್ಲಿಷ್ ಬಳಕೆ ಇಲ್ಲ. ಕರ್ನಾಟಕಕ್ಕೆ ಮಾತ್ರ ಹಿಂದಿ ಹೇರಿಕೆ ಏಕೆ? ಎಂದು ಕನ್ನಡಿಗರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ