ಸ್ವಾಮಿ ವಿವೇಕಾನಂದ ಪ್ರತಿಮೆ ಭಗ್ನಗೊಳಿಸಿದ ಜೆಎನ್ ಯು ವಿದ್ಯಾರ್ಥಿಗಳು

ಶುಕ್ರವಾರ, 15 ನವೆಂಬರ್ 2019 (09:33 IST)
ನವದೆಹಲಿ : ಉದ್ಘಾಟನೆಯಾಗಬೇಕಿರುವ ಸ್ವಾಮಿ ವಿವೇಕಾನಂದ ಪ್ರತಿಮೆಯನ್ನು ಕೆಲ ಪುಂಡ ವಿದ್ಯಾರ್ಥಿಗಳು ವಿರೂಪಗೊಳಿಸಿದ ಘಟನೆ ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು)ದಲ್ಲಿ ನಡೆದಿದೆ.




ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು  ಉಪ ಕುಲಪತಿ ಮಮಿದಲಾ ಜಗದೀಶ್ ಕುಮಾರ್ ಅವರ ಬಗ್ಗೆ ಸ್ವಾಮಿ ವಿವೇಕಾನಂದ ಪ್ರತಿಮೆಯ ಮೇಲೆ ಆಕ್ಷೇಪಾರ್ಹ ಬರಹ ಬರೆದು ಕೇಸರಿ ಬಟ್ಟೆ ಸುತ್ತಿದ್ದ ಪ್ರತಿಮೆಯನ್ನು  ಭಗ್ನಗೊಳಿಸಿದ್ದಾರೆ.


ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಇದರಲ್ಲಿ ತಮ್ಮ ಕೈವಾಡವಿಲ್ಲ. ವಿದ್ಯಾರ್ಥಿಗಳ ಹೆಸರು ಹಾಳು ಮಾಡಲು ಎಬಿವಿಪಿ ಹೀಗೆ ಮಾಡಿದೆ ಎಂದು ಜೆಎನ್ ಯು ವಿದ್ಯಾರ್ಥಿ ಒಕ್ಕೂಟ ಹೇಳಿದೆ. ಪೊಲೀಸರು ಈ ಕೃತ್ಯದ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ