ಹವಾನಿಯಂತ್ರಿತ ಬಸ್ ಪ್ರಯಾಣ ದರದಲ್ಲಿ 10 ರೂಪಾಯಿ ಮತ್ತು ಎಸಿ ರಹಿತ ಬಸ್ ಪ್ರಯಾಣ ದರದಲ್ಲಿ 5ರೂಪಾಯಿ ಇಳಿಸುವ ಕುರಿತು ಆಪ್ ಸರ್ಕಾರ ಕಳೆದ ವಾರ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಬೈಜಾಲ್ ಇದನ್ನು ಹಿಂತಿರುಗಿಸಿದ್ದು ಈ ಕುರಿತು ಮರುಪರಿಶೀಲಿಸುವಂತೆ ಆಪ್ ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ. ಇದು ಹೊಸ ಉಪರಾಜ್ಯಪಾಲ ಮತ್ತು ಸರ್ಕಾರದ ನಡುವೆ ತಿಕ್ಕಾಟಕ್ಕೆ ನಾಂದಿ ಹಾಡಿದೆ.