ಜಂಗ್ ನಿರ್ಗಮಿಸಿದರೂ ದೆಹಲಿಯಲ್ಲಿ ಮುಂದುವರೆದ 'ಜಂಗ್'

ಶುಕ್ರವಾರ, 13 ಜನವರಿ 2017 (11:11 IST)
ನವದೆಹಲಿಯಲ್ಲಿ ಸರ್ಕಾರ ಮತ್ತು ಉಪರಾಜ್ಯಪಾಲರ ನಡುವಿನ ಸಂಘರ್ಷ ಮುಂದುವರೆದಿದೆ. 

 
ನಜೀಬ್ ಜಂಗ್ ನವದೆಹಲಿಯ ಉಪರಾಜ್ಯಪಾಲರಾಗಿದ್ದ ಸಮಯದಲ್ಲಿ ಸರ್ಕಾರ ಮತ್ತು ಅವರ ನಡುವಿನ ಜಟಾಪಟಿ ಸದಾ ಸುದ್ದಿಯಲ್ಲಿರುತ್ತಿತ್ತು. ಮತ್ತೀಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರ್ಗಮಿಸಿದ್ದಾರೆ. ಅವರ ಸ್ಥಾನದಲ್ಲಿ ಅನಿಲ್ ಬೈಜಾಲ್ ಬಂದಿದ್ದಾರೆ. ಆದರೆ ಹಿಂದಿನಂತೆ ಸಂಘರ್ಷ ಮತ್ತೆ ಮುಂದುವರೆದಿದೆ.
 
ಬಸ್ ಪ್ರಯಾಣ ಇಳಿಸುವ ಕುರಿತಾದ ಪ್ರಸ್ತಾವನೆಯನ್ನು ಉಪರಾಜ್ಯಪಾಲರು ಹಿಂತಿರುಗಿಸಿದ್ದು ಈ ಹೊಸ ಸಂಘರ್ಷಕ್ಕೆ ಕಾರಣವಾಗಿದೆ.
 
ಹವಾನಿಯಂತ್ರಿತ ಬಸ್ ಪ್ರಯಾಣ ದರದಲ್ಲಿ 10 ರೂಪಾಯಿ ಮತ್ತು ಎಸಿ ರಹಿತ ಬಸ್‌ ಪ್ರಯಾಣ ದರದಲ್ಲಿ 5ರೂಪಾಯಿ ಇಳಿಸುವ ಕುರಿತು ಆಪ್ ಸರ್ಕಾರ ಕಳೆದ ವಾರ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಬೈಜಾಲ್ ಇದನ್ನು ಹಿಂತಿರುಗಿಸಿದ್ದು ಈ ಕುರಿತು ಮರುಪರಿಶೀಲಿಸುವಂತೆ ಆಪ್ ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ. ಇದು ಹೊಸ ಉಪರಾಜ್ಯಪಾಲ ಮತ್ತು ಸರ್ಕಾರದ ನಡುವೆ ತಿಕ್ಕಾಟಕ್ಕೆ ನಾಂದಿ ಹಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ