ಎಲ್ಲ ಮಧ್ಯವರ್ತಿಗಳ ಜತೆ ಮಾತುಕತೆ ನಡೆಸುವ ಮೂಲಕ ರಾಜ್ಯ ಎದುರಿಸುತ್ತಿರುವ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸುವತ್ತ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ನಡೆಯನ್ನಿಡಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತ ಪಡಿಸಿದ್ದಾರೆ.
ಕಾಶ್ಮೀರದ ಸನ್ನಿವೇಶವನ್ನು ಸಂಸತ್ತಿನ ಎರಡು ಸದನಗಳಲ್ಲಿ ಚರ್ಚಿಸಲಾಗಿದೆ. 2008 ಮತ್ತು 2010 ಪುನರಾವರ್ತನೆಯಾಗುವುದಿಲ್ಲ ಎಂದು ನಂಬಿರುತ್ತೇನೆ. ಈ ಬಾರಿ ರಾಜ್ಯದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು ಚರ್ಚೆಗೊಳಪಡುವ ಭರವಸೆ ನನಗಿದೆ. ಪ್ರತಿಯೊಬ್ಬರ ಜತೆ ಮಾತುಕತೆಯಾಗಬೇಕು ಎಂದು ಅವರು ಹೇಳಿದ್ದಾರೆ.
ಆಗಸ್ಟ್ 15 ರಂದು ಧ್ವಜಾರೋಹಣ ನಡೆಸಿ ಮಾತನ್ನಾಡುತ್ತಿದ್ದ ಅವರು, ಪ್ರಜಾಪ್ರಭುತ್ವದ ಬಹುದೊಡ್ಡ ಭಾಗ ಮಾತುಕತೆ. ಈ ಮೂಲಕ ನಾವು ಅನೇಕ ಸಮಸ್ಯೆಗಳಮ್ಮು ಬಗೆಹರಿಸಿದ್ದೇನೆ. ಆದರೆ ಕಾಶ್ಮೀರದ ವಿಷಯದಲ್ಲಿ ಯಾಕೆ ಸೋತಿದ್ದೇವೆ? ನಾವು ತಪ್ಪೆಸಗಿದ್ದು ಎಲ್ಲಿ? ಎಂದವರು ಭಾವನಾತ್ಮಕವಾಗಿ ಮಾತನ್ನಾಡಿದರು.