ಪ್ರಧಾನ ಮಂತ್ರಿ ನವಾಜ್ ಷರೀಫ್ ನೇತೃತ್ವದ ಪಕ್ಷ ಚುನಾವಣೆಯಲ್ಲಿ ಭಾರಿ ಪ್ರಮಾಣದ ರಿಗ್ಗಿಂಗ್ ನಡೆಸಿದೆ ಎಂದು ಆರೋಪಿಸಿ ಪ್ರತಿಭಟನೆಗಳು ನಡೆಯುತ್ತಿರುವ ಮಧ್ಯೆ ಗಿಲಿಗಿಸ್ತಾನ್ ಮತ್ತು ಪಾಕ್ ಆಕ್ರಮಿತ ಕಾಶ್ಮಿರವನ್ನು ಪಾಕ್ಗೆ ಒಪ್ಪಿಸಿ, ಕಾಶ್ಮಿರವನ್ನು ನೀವೇ ಇಟ್ಟುಕೊಳ್ಳಿ ಎಂದು ಭಾರತವನ್ನು ಓಲೈಸುವ ಯತ್ನ ಮಾಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಮೊದಲು ಗೆಳೆಯರಾಗಲು ಪ್ರಯತ್ನಿಸಬೇಕು. ನಂತರ ಮಾತುಕತೆ ಆರಂಭಿಸಬೇಕು. ಆದರೆ, ಅದು ಸಾಧ್ಯವಿಲ್ಲ ಎನ್ನುವಂತಾಗಿದೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದಕರು ಮತ್ತು ಹಪೀಝ್ ಸಯೀದ್ನಂತಹ ವ್ಯಕ್ತಿಗಳಿರುವದರಿಂದ ದ್ವೇಷ ಮತ್ತಷ್ಟು ಹೆಚ್ಚಲು ಕಾರಣವಾಗುತ್ತಿದೆ ಎಂದು ಪಾಕಿಸ್ತಾನದ ಮಾಜಿ ರಾಯಭಾರಿ ಹುಸೈನ್ ಹಕ್ಕಾನಿ ಬೇಸರ ವ್ಯಕ್ತಪಡಿಸಿದ್ದಾರೆ.