ಪಳನಿ ವಿಶ್ವಾಸಮತ ರದ್ದಿಗೆ ಅರ್ಜಿ: ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ

ಬುಧವಾರ, 22 ಫೆಬ್ರವರಿ 2017 (07:08 IST)
ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಿದ ರೀತಿ ಸಂವಿಧಾನಬಾಹಿರವಾಗಿದ್ದು ಈ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಡಿಎಂಕೆ ಮದ್ರಾಸ್ ಹೈಕೋರ್ಟ್‌ಗೆ ಸಲ್ಲಿಸಿರುವ ವಿಚಾರಣೆ ಇಂದು ನಡೆಯಲಿದೆ.
 
ಸದನದಿಂದ ವಿರೋಧಪಕ್ಷವನ್ನು ಹೊರಗಿಟ್ಟು ವಿಶ್ವಾಸಮತ ಯಾಚಿಸಿದ್ದು ಪ್ರಜಾಪ್ರಭುತ್ವ ವಿರೋಧಿ , ಹಾಗಾಗಿ ಮತ್ತೆ ವಿಶ್ವಾಸಮತ ಪ್ರಕ್ರಿಯೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
 
ನ್ಯಾಯಮೂರ್ತಿ ರಮೇಶ್ ನೇತೃತ್ವದ ಪಕ್ಷ ಈ ವಿಚಾರಣೆಯನ್ನು ನಡೆಸಲಿದ್ದು ಪಳನಿಸರ್ಕಾರದ ಭವಿಷ್ಯವೀಗ ಹೈಕೋರ್ಟ್ ಅಂಗಳದಲ್ಲಿದೆ.

ವೆಬ್ದುನಿಯಾವನ್ನು ಓದಿ