ಬಾಲಕನ ಜೀವ ಕಿತ್ತುಕೊಂಡ ಆರೋಪಿಗೆ ಕುಟುಂಬಸ್ಥರೇ ಕೊಟ್ಟರು ಗುನ್ನ

ಶುಕ್ರವಾರ, 6 ನವೆಂಬರ್ 2020 (11:06 IST)
ನವದೆಹಲಿ: ನಾಲ್ಕು ವರ್ಷದ ಬಾಲಕನನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಾಲಕನ ಕುಟುಂಬಸ್ಥರೇ ಹಿಡಿದು ಗೂಸಾ ಕೊಟ್ಟಿದ್ದಲ್ಲದೆ, ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ಬರೇಲಿಯಲ್ಲಿ ನಡೆದಿದೆ.


ಜುಲೈನಲ್ಲಿ ಬಾಲಕನ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಘಟನೆ ಆರೋಪಿಯ ಪತ್ತೆಗೆ ಪೊಲೀಸರು 25 ಸಾವಿರ ರೂ. ಬಹುಮಾನ ಘೋಷಿಸಿದ್ದರು. ಕೊನೆಗೂ ಈಗ ಆರೋಪಿ ಪತ್ತೆಯಾಗಿದ್ದು, ಆತನನ್ನು ಕೈಗೆ ಸಿಕ್ಕಿದ ರಾಡ್, ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪರಿಣಾಮ ಆರೋಪಿ ಸಾವನ್ನಪ್ಪಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ