ಸಂಬಳ ಸಿಗದಿದ್ದುದಕ್ಕೆ ಎಟಿಎಮ್‌ನ್ನೇ ಚೂರುಚೂರಾಗಿಸಿದ

ಗುರುವಾರ, 28 ಜುಲೈ 2016 (10:19 IST)
ಸಂಬಳ ಹಾಕಿಲ್ಲವೆಂಬ ಸಿಟ್ಟಿನಲ್ಲಿ 31 ವರ್ಷದ ವ್ಯಕ್ತಿಯೋರ್ವ ಎಟಿಎಂ ಯಂತ್ರವನ್ನೇ ಒಡೆದು ಹಾಕಿದ ವಿಲಕ್ಷಣ ಘಟನೆ ಮುಂಬೈನ ಭಿವಂಡಿಯಲ್ಲಿ ನಡೆದಿದೆ.


ಆರೋಪಿಯನ್ನು ಸಿದ್ದಾರ್ಥ್ ಜಗ್ತಪ್ ಎಂದು ಗುರುತಿಸಲಾಗಿದ್ದು ಆತ ಗಾಯತ್ರಿನಗರದ ನಿವಾಸಿಯಾಗಿದ್ದಾನೆ. ನೀರಿನ ಟ್ಯಾಂಕರ್ ಚಾಲಕನಾಗಿ ಕೆಲಸ ಮಾಡುವ ಆತ ಸಂಬಳ ನೀಡಿಲ್ಲವೆಂದು ಹತಾಶನಾಗಿದ್ದ. ಬುಧವಾರ ಮುಂಜಾನೆ ಗಾಯತ್ರಿನಗರದಲ್ಲಿರುವ ಎಕ್ಸಿಸ್ ಬ್ಯಾಂಕ್‌ಗೆ ಹೋದ ಆತ ಎಟಿಎಂ ಒಡೆದು ಹಣ ದೋಚಲು ಯತ್ನಿಸಿದ್ದಾನೆ. ಆದರೆ ಹಣವನ್ನು ಕದಿಯಲು ವಿಫಲನಾಗಿದ್ದಾನೆ.

ಆತ ಅಲ್ಲಿಂದ ತೆರಳಿದ ಬಳಿಕ ಹಣ ತೆಗೆಯಲು ಬಂದಿದ್ದ ಮತ್ತೊಬ್ಬ ಗ್ರಾಹಕ ಎಟಿಎಂ ಧ್ವಂಸವಾಗಿರುವುದರ ಬಗೆಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಸ್ಥಳಕ್ಕಾಗಮಿಸಿದ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ