ಮೃತ ರಂಜಿತ್ ಕುಮಾರ್ (27) ಯುವತಿಯೊಬ್ಬಳನ್ನು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ. ಆಕೆಯನ್ನು ಮದುವೆ ಮಾಡಲು ಮೊದಲು ಒಪ್ಪಿದ್ದ ಯುವತಿಯ ಸಂಬಂಧಿಕರು ಬಳಿಕ ನಿರಾಕರಿಸಿದ್ದರು. ಈ ಯುವತಿಯ ತಾಯಿಯ ಸಹೋದರ , ರೌಡಿಶೀಟರ್, ಸಂಸದ ಡಿ.ಕೆ. ಸುರೇಶ್ ಸಹಚರ ಎನ್ನಲಾಗುತ್ತಿರುವ ಸಂಭಯ್ಯ ರಂಜಿತ್ಗೆ ಯುವತಿಯನ್ನು ಮರೆತುಬಿಡುವಂತೆ ವಿಪರೀತ ಕಿರುಕುಳ ನೀಡಿದ್ದಾನೆ. ಇದರಿಂದ ನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆತ ಡೆತ್ ನೋಟ್ ಕೂಡ ಬರೆದಿಟ್ಟಿದ್ದು ಈ ಕುರಿತು ತನಿಖೆ ಪ್ರಾರಂಭಿಸಿದ ಅತ್ತಿಬೆಲೆ ಪಿಎಸ್ ಐಗೆ ಆನೇಕಲ್ ಶಾಸಕ ಶಿವಣ್ಣ 'ಅವರು ನಮ್ಮ ಹುಡುಗರು, ಬಿಟ್ಟುಬಿಡಿ', ಎಂದು ಒತ್ತಡ ಹೇರಿದ್ದು ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.