ಹೋಟೆಲ್ ನಲ್ಲಿ ಕೊಳಕು ಟಿಶ್ಯೂ ಪೇಪರ್ ಇಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೇ ನಡೆಯಿತು ರಕ್ತಪಾತ!

ಗುರುವಾರ, 19 ನವೆಂಬರ್ 2020 (10:14 IST)
ಥಾಣೆ: ಕೊಳಕು ಟಿಶ್ಯೂ ಪೇಪರ್ ಇಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೆ ಗ್ರಾಹಕರೊಬ್ಬರನ್ನು ಢಾಬಾ ಸಿಬ್ಬಂದಿಗಳೇ ಹತ್ಯೆ ಮಾಡಿದ ಘಟನೆ ಥಾಣೆಯಲ್ಲಿ ನಡೆದಿದೆ.


ನವನಾಥ್ ಪಾವ್ನೆ ಎಂಬವರು ಮೃತರು. ಇದೇ ಡಾಬಾದ ಮೂವರು ಸಿಬ್ಬಂದಿಗಳು ಮತ್ತು ನವನಾಥ್ ನಡುವೆ ಟಿಶ್ಯೂ ವಿಚಾರಕ್ಕೆ ಜಗಳ ನಡೆದಿದ್ದು, ಇದು ತಾರಕಕ್ಕೇರಿ ಸಿಬ್ಬಂದಿಗಳು ಸೇರಿಕೊಂಡು ನವನಾಥ್ ರನ್ನು ಹತ್ಯೆ ಮಾಡಿದ್ದಾರೆ. ಈ ಸಂಬಂಧ ಮೂವರು ವೇಯ್ಟರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ