ಸಿಗರೇಟ್ ತರಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನಿಗೇ ಚಾಕುವಿನಿಂದ ಇರಿದು ಕೊಂದೇ ಬಿಟ್ಟರು..!

ಭಾನುವಾರ, 9 ಏಪ್ರಿಲ್ 2017 (18:26 IST)
ಸಿಗರೇಟ್ ತರಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರೇ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಬೆಂಗಳೂರಿನ ಹಳೇ ಬಾಗಲೂರು ಲೇಔಟ್ ಬಳಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನ 30 ವರ್ಷದ ಮೊಹಮ್ಮದ್ ಅಲಿ ಎಂದು ಗುರ್ತಿಸಲಾಗಿದೆ.

ಆಟೋ ಚಾಲಕನಾಗಿರುವ ಮೊಹಮ್ಮದ್ ಅಲಿ ಕಳೆದ ರಾತ್ರಿ ಮೂವರು ಆಟೋ ಸ್ಟ್ಯಾಂಡ್ ಸ್ನೇಹಿತರ ಜೊತೆ ಗುಮಡಿನ ಪಾರ್ಟಿ ಮಾಡಿದ್ದ. ಈ ಸಂದರ್ಭ ಸಿಗರೇಟ್ ತರಲು ಸ್ನೇಹಿತರು ಮೊಹಮ್ಮದ್`ಗೆ ಸೂಚಿಸಿದ್ದಾರೆ. ಮೊಹಮ್ಮದ್ ನಿರಾಕರಿಸಿದ ಹಿನ್ನೆಲೆಯಲ್ಲಿ ಸ್ನೇಹಿತರೇ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ. ಮೊಹಮ್ಮದ್ ಅರಚಾಟ ಕೇಳಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಮೊಹಮ್ಮದ್ ಮೃತಪಟ್ಟಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಕೆ.ಜಿ. ಹಳ್ಳಿ ಪೊಲಿಸರು, ಆರೋಪಿಗಳಾದ ಸಬಾರಕ್, ವಾಹಿದ್`ಗೆ ಬಲೆ ಬೀಸಿದ್ದಾರೆ.

ವೆಬ್ದುನಿಯಾವನ್ನು ಓದಿ