ಆರ್ಥಿಕ ಪರಿಷ್ಕರಣ ನೀತಿ ಕುರಿತಂತೆ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಬಿಜೆಪಿ ಮುಖಂಡ ಸುಬ್ರಮಣ್ಯಂ ಸ್ವಾಮಿ, ಮಾಧ್ಯಮಗಳು ರಾಜನ್ರನ್ನು ದೇವದೂತರಂತೆ ನನ್ನನ್ನು ಭೂತದಂತೆ ಬಿಂಬಿಸುತ್ತಿವೆ ಎಂದು ಕಿಡಿಕಾರಿದ್ದಾರೆ.
ವಿದೇಶಿ ಶಕ್ತಿಗಳಿಂದ ಪ್ರೇರಿತವಾದ ಮಾಧ್ಯಮಗಳು ರಾಜನ್ ಹುದ್ದೆಯಿಂದ ನಿರ್ಗಮಿಸಿದಲ್ಲಿ ಶೇರುಪೇಟೆ ಕುಸಿದುಹೋಗುತ್ತದೆ ಎನ್ನುವ ಅನುಮನ ವ್ಯಕ್ತಪಡಿಸುತ್ತಿವೆ. ಆದರೆ, ವಾಸ್ತವವಾಗಿ ರಾಜನ್ ನಿರ್ಗಮಿಸಿದಲ್ಲಿ ಶೇರುಪೇಟೆ ಚೇತರಿಕೆ ಕಾಣುತ್ತದೆ ಎಂದು ತಿರುಗೇಟು ನೀಡಿದ್ದಾರೆ.