ಮೇಘಾಲಯು ಹನಿಮೂನ್ ಪ್ರಕರಣ: ಓಡಾಟದ ವೇಳೆ ಗುರುತು ಸಿಗಬಾರದೆಂದು ಸೋನಮ್ ಮಾಡಿದ್ಲು ಖತರ್ನಾಕ್ ಪ್ಲಾನ್‌

Sampriya

ಶುಕ್ರವಾರ, 20 ಜೂನ್ 2025 (15:48 IST)
ಇಂಧೋರ್‌: ದೇಶವನ್ನೇ ಬೆಚ್ಚಿಬೀಳಿಸಿದ ಮೇಘಾಲಯ ಹನಿಮೂನ್‌ ಪ್ರಕರಣದಲ್ಲಿ ಪತಿಯನ್ನು ಕೊಲ್ಲಲು ಪ್ರಿಯಕರನ ಜತೆ ಸೇರಿ ಪತ್ನಿ ಮಾಡಿದ ಭಯಾನಕ ಪ್ಲ್ಯಾನ್ ಇದೀಗ ಒಂದೊಂದೇ ಬಹಿರಂಗವಾಗುತ್ತಿದೆ. 

ಉದ್ಯಮಿ ರಾಜಾ ರಘುವಂಶಿ ಹತ್ಯೆ ಪ್ರಕರಣದಲ್ಲಿ ಕ್ಯಾಬ್‌ ಚಾಲಕನನ್ನು ವಿಚಾರಣೆಗೆ ಒಳಪಡಿಸಲಾಗಿದೆ. 

ತನ್ನ ಪತಿ ರಾಜಾ ರಘುವಂಶಿಯ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸೋನಂ ರಘುವಂಶಿ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದಾಗ ಬುರ್ಖಾ ವೇಷ ಧರಿಸಿರುವುದಾಗಿ ಕ್ಯಾಬ್ ಚಾಲಕ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಕಳೆದ ತಿಂಗಳು ಮಧುಚಂದ್ರದ ವೇಳೆ ಮೇಘಾಲಯದಲ್ಲಿ ಆಕೆಯ ಪತಿಯನ್ನು ಹತ್ಯೆಗೈದ ನಂತರ ಸೋನಮ್ ಯುಪಿಯ ಗಾಜಿಪುರದಲ್ಲಿ ಪತ್ತೆಯಾಗಿದ್ದಳು. 
ಸೋನಂ ಪ್ರಸ್ತುತ ಶಿಲ್ಲಾಂಗ್ ಪೊಲೀಸರ ವಶದಲ್ಲಿದ್ದು, ಸಹ ಆರೋಪಿ ರಾಜ್ ಕುಶ್ವಾಹಾ ಜೊತೆಗೆ ಆಕೆಯ ಪ್ರಿಯಕರನ ಪೊಲೀಸ್ ರಿಮಾಂಡ್ ಅನ್ನು ಗುರುವಾರ ಎರಡು ದಿನಗಳವರೆಗೆ ವಿಸ್ತರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ