ಪಡಿತರ ಆಹಾರ ಧಾನ್ಯಕ್ಕೆ ಬದಲು ಅಕೌಂಟಿಗೆ ಬೀಳಲಿದೆ ಹಣ..!

ಮಂಗಳವಾರ, 1 ಆಗಸ್ಟ್ 2017 (11:27 IST)
ಪಡಿತರ ವಿತರಣಾ ವ್ಯವಸ್ಥೆಯನ್ನ ರದ್ದು ಮಾಡಿ ಎಲ್`ಪಿಜಿ ಸಬ್ಸಿಡಿ ರೀತಿ ಫಲಾನುಭವಿಗಳ ಖಾತೆಗೇ ನೇರವಾಗಿ ಹಣ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಸ್ವತಃ ಪ್ರಧಾನಮಂತ್ರಿ ನರೇಂದ್ರಮೋದಿ ಸಂಸದರ ಸಭೆಯಲ್ಲಿ ಈ ಪ್ರಸ್ತಾಪ ಇಟ್ಟಿದ್ದಾರೆ. ಪುದುಚೇರಿ ಮತ್ತು ಹರಿಯಾಣ ರಾಜ್ಯಗಳಲ್ಲಿ ಜಾರಿಯಲ್ಲಿರುವ ಈ  ಯೋಜನೆ ಯಶಸ್ಸು ಕಂಡಿದೆ. ಹೀಗಾಗಿ, ದೇಶಾದ್ಯಂತ ವಿಸ್ತರಣೆ ಚಿಂತನೆ ನಡೆಸಿದ್ದಾರೆ. ಪಡಿತರ ವಿತರಣೆಯಲ್ಲಾಗುವ ಅವ್ಯವಹಾರ ತಡೆಯಲು ಈ ಕ್ರಮ ರಾಮಬಾಣ ಎನ್ನಲಾಗುತ್ತಿದೆ.

ಚಂಢೀಗಡ ಮತ್ತು ಹರ್ಯಾಣದಲ್ಲಿ ಸೀಮೆಎಣ್ಣೆ ಮುಕ್ತವಾಗಿರುವುದರಿಂದ ಅಲ್ಲಿ ವಿತರಣೆಯಲ್ಲಿ ಕಂಡುಬರುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ. ಅದೇ ರೀತಿ ಪಡಿತರ ವ್ಯವಸ್ಥೆ ಸುಧಾರಣೆಗೆ ಕೇಂದ್ರ ಚಿಂತನೆ ನಡೆಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ