ಮೋದಿ ಸುಳ್ಳಿನ ಮಾತುಗಳು ಯಾವಾಗಲು ಕೆಲಸ ಮಾಡಲ್ಲ: ಮಲ್ಲಿಕಾರ್ಜುನ ಖರ್ಗೆ

Sampriya

ಶನಿವಾರ, 27 ಏಪ್ರಿಲ್ 2024 (19:38 IST)
Photo Courtesy X
ಬರ್‌ಪೇಟ: ದೇಶದಲ್ಲಿ ಶೇ 65ರಷ್ಟು ವಿದ್ಯಾವಂತ ಯುವಕರು ನಿರುದ್ಯೋಗವಂತಾಗಿದ್ದಾರೆ. ಇದಕ್ಕೆಲ್ಲ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಲೋಕಸಭಾ ಚುನಾವಣೆ ಹಿನ್ನೆಲೆ ಅವರು ಅಸ್ಸಾಂನ ಬರ್‌ಪೇಟ ಜಿಲ್ಲೆಯ ಕಾಯಕುಚಿಯ ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಸ್ತುತ ದೇಶದಲ್ಲಿ ನಿರುದ್ಯೋಗ ದೊಡ್ಡ ಸವಾಲಾಗಿದ್ದು, ಶೇ 65ರಷ್ಟು ಯುವಜನತೆ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಮುಸ್ಲಿಂ ಲೀಗ್‌ನಂತಿದೆ ಎಂದು ಬಿಜೆಪಿ ಆರೋಪವನ್ನು ಅವರು ನಿರಾಕರಿಸಿದರು.

ದೇಶದಲ್ಲಿ ಪ್ರಧಾನಿ ಮೋದಿ ಅವರ ಸುಳ್ಳಿನ ಮಾತುಗಳು ಯಾವಾಗಲು ಕೆಲಸ ಮಾಡಲ್ಲ. ಪ್ರಧಾನಿ ಒಬ್ಬರು ಸುಳ್ಳುಗಾರ. ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದು, ಕಪ್ಪು ಹಣ ವಾಪಸ್ ತಂದು ಪ್ರತಿಯೊಬ್ಬರಿಗೂ ₹15 ಲಕ್ಷ ಕೊಡುತ್ತೇನೆ ಎಂದಿದ್ದು, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದು ಅವೆಲ್ಲವೂ ಸುಳ್ಳು ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ