ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ಕೈಬೆರಳು ಕತ್ತರಿಸಿ ಕಾಳಿಗೆ ರಕ್ತ ಸಮರ್ಪಿಸಿದ ಕಾರವಾರದ ವ್ಯಕ್ತಿ

Sampriya

ಶನಿವಾರ, 6 ಏಪ್ರಿಲ್ 2024 (17:47 IST)
Photo Courtesy Facebook
ಉತ್ತರಕನ್ನಡ: ಅಭಿಮಾನಿಗಳು ತನ್ನ ಪ್ರೀತಿಯನ್ನು ತೋರಿಸಲು ಟ್ಯಾಟು ಹಾಕಿಸಿಕೊಳ್ಳುವುದು, ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದು ನಾವೆಲ್ಲ ಕೇಳಿರುತ್ತೇವೆ.

ಆದರೆ ಇಲ್ಲೊಬ್ಬ ಮೋದಿ ಭಕ್ತ ಮೂರನೇ ಬಾರಿಯೂ ಪ್ರಧಾನಿಯಾಗಬೇಕೆಂದು ತನ್ನ ಎಡಗೈ ಬೆರಳನ್ನು ಕತ್ತರಿಸಿ ಕಾಳಿಗೆ ರಕ್ತ ಅರ್ಪಿಸಿದ ಘಟನೆ ಕಾರಾವಾರ ಸೋನಾರವಾಡದಲ್ಲಿ ನಡೆದಿದೆ. ಅರುಣ್ ಎಂಬ ವ್ಯಕ್ತಿ ತನ್ನ ಬೆರಳನ್ನು ಕೊಯ್ದು ರಕ್ತದಲ್ಲಿ ಮತ್ತೇ ಮೋದಿ ಪ್ರಧಾನಿಯಾಗಬೇಕೆಂದು ಬರೆದಿದ್ದಾನೆ.

ಅದಲ್ಲದೆ  ಮೋದಿಗಾಗಿ ಗುಡಿಯೊಂದನ್ನು ನಿರ್ಮಿಸಿ ಪೂಜೆಯನ್ನು ನೆರವೇರುಸಿದ್ದಾನೆ.  ಬೆರಳು ತುಂಡುಮಾಡಿಕೊಂಡು ಅದರಿಂದ ಸುರಿದ ರಕ್ತದಲ್ಲಿ, 'ಮಾ ಕಾಳಿಮಾತಾ ಮೋದಿ ಬಾಬಾಕೋ ರಕ್ಷಾ ಕರೋ' ಎಂದು ಬರೆದಿದ್ದಾರೆ. 'ಮೋದಿ ಬಾಬ ಪಿಎಂ, 3 ಬಾರ್ 78ತಕ್ 378, 378+ ಮೇರ ಮೋದಿ ಬಾಬಾ ಸಬ್ ಸೆ ಮಹಾನ್' ಎಂದು ಗೋಡೆ ಮೇಲೆ ಹಾಗೂ ಪೋಸ್ಟರ್​​ನಲ್ಲಿ ಅರುಣ್ ಬರೆದಿದ್ದಾರೆ.

ಇನ್ನೂ ಮೋದಿ ಮೊದಲ ಬಾರಿ ಚುನಾವಣೆಗೆ ನಿಂತಾಗಲೂ ಇವರು ರಕ್ತದಲ್ಲಿ ಕಾಳಿಗೆ ಹರಕೆ ಕಟ್ಟಿದ್ದರು. ಅದಲ್ಲದೆ ಮೋದಿ ಬಾಬಾ ಎಂದು ಟ್ಯಾಟುವನ್ನು ಹಾಕಿ ಅವರನ್ನು ಆರಾಧಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ