ಅಳಿಯನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಕೊಂದ ಅತ್ತೆ

ಸೋಮವಾರ, 21 ಜನವರಿ 2019 (07:17 IST)
ಚೆನ್ನೈ : ಕೊಲೆ ಬೆದರಿಕೆ ಹಾಕಿದ ಅಳಿಯನ ಮೇಲೆ ಅತ್ತೆಯೇ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯಲ್ಲಿ ನಡೆದಿದೆ.


ಸಿರ್ಕಾಳಿ ಗ್ರಾಮದ ಗಣೇಶ್ ಅತ್ತೆಯಿಂದ ಕೊಲೆಯಾದ ಅಳಿಯ. ಸಟ್ಟನಾದಪುರಾ ಗ್ರಾಮದ ಆಂಡಾಳಮ್ಮ ಅಳಿಯನಿಗೆ ಬೆಂಕಿ ಹಚ್ಚಿದ ಆರೋಪಿ. ಆಂಡಾಳಮ್ಮ ಐದು ವರ್ಷದ ಹಿಂದೆ ತನ್ನ ಮಗಳು ರಮ್ಯಾಳನ್ನು ಗಣೇಶ್​ ಜೊತೆಗೆ ಮದುವೆ ಮಾಡಿಸಿದ್ದರು. ಇವರಿಗೆ 4 ವರ್ಷದ ಮಗಳಿದ್ದಾಳೆ. ಆದರೆ ರಮ್ಯಾ, ಪತಿ ಗಣೇಶನ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಳು.


ಈ ಘಟನೆಗೆ ಸಂಬಂಧಿಸಿದಂತೆ ಅತ್ತೆ ಆಂಡಾಳಮ್ಮ ಅಳಿಯ ಗಣೇಶ್ ವಿರುದ್ಧ ಪೊಲೀಸ್ ಠಾಣಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಪೊಲೀಸರು ಗಣೇಶ್​ನನ್ನು ಅರೆಸ್ಟ್​ ಮಾಡಿದ್ದರು. ಆದರೆ ಇತ್ತೀಚೆಗೆ ಜಾಮೀನಿನ ಮೇಲೆ ಹೊರ ಬಂದ ಗಣೇಶ್ ಕುಡಿದು ತನ್ನ ಅತ್ತೆ ಮನೆಗೆ ತೆರಳಿ ಮಗಳು ಹಾಗೂ ಅತ್ತೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಭಯಗೊಂಡ ಆಂಡಾಳಮ್ಮ ಗಣೇಶ್​ನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.


ಇತ್ತ ​ ಕೂಗಾಟ ಕೇಳಿ ನೆರೆಹೊರೆಯವರು ಗಣೇಶ್​ ನನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅತ್ತೆ ಆಂಡಾಳಮ್ಮನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ