ಮುಸ್ಲಿಮರೇ ಹೆಣ ದಫನ ಮಾಡಬೇಡ್ರಿ ಎನ್ನುತ್ತಿದ್ದಾರೆ ಸಾಕ್ಷಿ ಮಹಾರಾಜ್

ಮಂಗಳವಾರ, 28 ಫೆಬ್ರವರಿ 2017 (14:14 IST)
ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್  ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಹೊಸದೇನಲ್ಲ. ಆದರೆ ಈ ಬಾರಿ ಅವರು ನೀಡಿರುವ ಹೇಳಿಕೆ ಬಹುದೊಡ್ಡ ವಿವಾದವನ್ನು ಸೃಷ್ಟಿಸುವುದಂತೂ ಸತ್ಯ. 
ದೇಶದಲ್ಲಿ ಸ್ಥಳದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಧರ್ಮ- ಸಂಪ್ರದಾಯದ ಜನರಿಗೆ ಶವವನ್ನು ಹೂಳುವ ಅನುಮತಿ ನೀಡಬಾರದು. ಬದಲಾಗಿ ಶವಗಳನ್ನು ಸುಡಬೇಕು ಎನ್ನುವುದರ ಮೂಲಕ ಸಾಕ್ಷಿ ಬಹುದೊಡ್ಡ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ.
 
ದೇಶದಲ್ಲಿ ಎರಡುವರೆ ಕೋಟಿ ಸಾಧುಗಳಿದ್ದಾರೆ. ಪ್ರತಿಯೊಬ್ಬ ಸಮಾಧಿಗೆ ಎಷ್ಟು ಜಾಗ ಬೇಕಾಗಬಹುದು. ಜತೆಗೆ 20ಕೋಟಿ ಮುಸ್ಲಿಂ ಸಮುದಾಯದವರಿದ್ದಾರೆ. ಅವರಿಗೆಲ್ಲರಿಗೂ ಸ್ಮಶಾನ ಬೇಕೆಂದರೆ ದೇಶದಲ್ಲಿ ಭೂಮಿ ಹೇಗೆ ಉಳಿಯಲು ಸಾಧ್ಯ ಎಂದವರು ಪ್ರಶ್ನಿಸಿದ್ದಾರೆ.
 
ಸಾಧು ಅವರ ಯೋಚನಾ ಲಹರಿ ಅಲ್ಲಿಗೆ ನಿಂತಿಲ್ಲ. ನೀವದನ್ನು ಕಬ್ರಿಸ್ತಾನ್ ಎನ್ನಿ ಅಥವಾ ಸ್ಮಶಾನ ಎನ್ನಿ. ಎಲ್ಲ ಶವಗಳನ್ನು ಸುಡಬೇಕು. ಯಾವುದೇ ಶವವನ್ನು ಹೂಳಲು ಅನುಮತಿ ನೀಡಬಾರದು ಎಂದು ಉನ್ನಾವೋ ಸಂಸದ ಆಗ್ರಹಿಸಿದ್ದಾರೆ. 
 
ಈ ಹಿಂದೆ ಸಹ ಅನೇಕ ಬಾರಿ ಅವರು ಮುಸ್ಲಿಂ ಸಮುದಾಯದವರ ವಿರುದ್ಧ ಹೇಳಿಕೆ ನೀಡಿದ್ದರು. 4 ಪತ್ನಿ, 40ಮಕ್ಕಳನ್ನು ಹೊಂದುವ ಮುಸ್ಲಿಂ ಸಮುದಾಯದವರೇ ನಮ್ಮ ದೇಶದ ಜನಸಂಖ್ಯೆ ಹೆಚ್ಚಾಗಲು ಕಾರಣ. ಹಿಂದೂಗಳಲ್ಲ ಎಂದು ಹೇಳುವುದರ ಮೂಲಕ ಚುನಾವಣಾ ಆಯೋಗದಿಂದ ನೋಟಿಸ್ ಸಹ ಪಡೆದಿದ್ದರು
 

ವೆಬ್ದುನಿಯಾವನ್ನು ಓದಿ