ಸಚಿವ ಸ್ಥಾನವೋ..? ಕಾಮಿಡಿ ಶೋನೋ..? ಸಿಧುಗೆ ಸಂಕಷ್ಟ ಶುರು

ಗುರುವಾರ, 23 ಮಾರ್ಚ್ 2017 (07:56 IST)

ಪಂಜಾಬ್ ಸಚಿವ , ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಸಚಿವರಾದ ಬಳಿಕವೂ ಕಪಿಲ್ ಶರ್ಮಾ ಕಾಮಿಡಿ ಶೋನಲ್ಲಿ ಭಾಗವಹಿಸುತ್ತೇನೆಂಬ ಸಿದು ಹಠಕ್ಕೆ ಸ್ವತಃ ಸಿಎಂ ಅಮರೀಂದರ್ ಸಿಂಗ್ ಚಾಟಿ ಬೀಸಿದ್ದಾರೆ.

 

ಒಂದೊಮ್ಮೆ ಸಿಧು ತಮ್ಮ ನಟನಾ ವೃತ್ತಿ ಮುಂದುವರೆಸಿದರೆ ಅವರ ಖಾತೆ ಬದಲಾಯಿಸಲಾಗುತ್ತೆ ಎನ್ನುವ ಮೂಲಕ ಸಿಧುಗೆ ಸಿಎಂ ಅಮರೀಂದರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಕಾನೂನು ತಜ್ಞರ ಜೊತೆ ಈ ಬಗ್ಗೆ ಚರ್ಚಿಸಿದ್ದಾರೆಂದು ತಿಳಿದುಬಂದಿದೆ.

ಪ್ರವಾಸೋದ್ಯಮ ಮತ್ತು ವಸ್ತು ಸಂಗ್ರಹಾಲಯ ಖಾತೆಗಳ ಜೊತೆ ಸಿಧುಗೆ ಸಂಸ್ಕೃತಿ ಖಾತೆ ಸಹ ನೀಡಲಾಗಿದೆ. ಒಂದೊಮ್ಮೆ ಅವರು ಟಿವಿ ಶೋ ಮುಂದುವರಿಸಿದ್ದೇ ಆದರೆ ಅವರ ಖಾತೆ ಮತ್ತು ನಟನಾ ವೃತ್ತಿ ನಡುವೆ ಹಿತಾಸಕ್ತಿ ಸಂಘರ್ಷ ಎದುರಾಗಲಿದೆ.

ಡಿಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದ ಸಿಧುಗೆ ಲೋ ಪ್ರೊಫೈಲ್ ಸಚಿವ ಸ್ಥಾನ ನೀಡಿರುವುದೂ ಕೊಂಚ ಅಸಮಾಧಾನ ಹುಟ್ಟಿಸಿದೆ ಎನ್ನಲಾಗಿದೆ. ಪ್ರತೀ ಬಾರಿ ತನ್ನನ್ನ ವಿರೋಧಿಸುವವರಿಗೆ ಖಡಕ್ ತಿರುಗೇಟು ನೀಡುವ ಸಿಧು ಈ ಬಾರಿ ಸಿಎಂಗೆ ಯಾವ ಉತ್ತರ ನೀಡುತ್ತಾರೋ ಕಾದುನೋಡಬೇಕು.

ವೆಬ್ದುನಿಯಾವನ್ನು ಓದಿ