ಇಂದೋರ್: ಹನಿಮೂನ್ಗೆಂದು ಶಿಲ್ಲಾಂಗ್ಗೆ ಹೋದ ನವದಂಪತಿ ನಾಪತ್ತೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಮಧ್ಯೆ ಗಂಡನ ಶವ ಕಮರಿನಲ್ಲಿ ಪತ್ತೆಯಾಗಿದೆ. ಪತ್ನಿಗಾಗಿ ಹುಡುಕಾಟ ಮುಂದುವರಿದಿದೆ.
ಇಂದೋರ್ನ ನವಜೋಡಿ ರಾಜಾ ರಘುಬಂಶಿ ಮತ್ತು ಸೋನಮ್ ಅವರು ಮೇ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಮೇ 20ರಂದು ಹನಿಮೂನ್ಗೆ ಶಿಲ್ಲಾಂಗ್ ಗೆ ತೆರಳಿದ್ದರು. ಹನಿಮೂನ್ ಎಂಜಾಯ್ ಮಾಡಲು ಹೋದ ಗಂಡ-ಹೆಂಡತಿ ಇಬ್ಬರೂ ಕಣ್ಮರೆ ಆಗಿದ್ದಾರೆ. ಆತಂಕದಲ್ಲಿದ್ದ ಕುಟುಂಬಸ್ಥರು ದೂರು ನೀಡಿದ್ದಾರೆ.
ಕೆಲ ದಿನಗಳ ಬಳಿಕ ರಾಜಾ ರಘುಬಂಶಿ ಶವ ಪತ್ತೆಯಾಗಿತ್ತು, ಆದರೆ ಅವನ ಹೆಂಡತಿ ಇನ್ನೂ ಸಿಕ್ಕಿಲ್ಲ. ಈ ಘಟನೆಯು ಜನರನ್ನು ಬೆಚ್ಚಿಬೀಳಿಸಿದೆ. ರಾಜಾ ಅವರ ಸಹೋದರ ಬಿಪಿನ್ ರಘುಬಂಶಿ ಈಗಾಗಲೇ ಶಿಲ್ಲಾಂಗ್ ಆಡಳಿತ ಮತ್ತು ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕೇಸ್ ಅನ್ನು ಸಿಬಿಐಗೆ ನೀಡುವಂತೆಯೂ ಒತ್ತಾಯ ಮಾಡಿದ್ದಾರೆ.
ರಾಜಾ ಹತ್ಯೆಯ ನಂತರ ಅವರ ಪತ್ನಿ ಸೋನಂ ಪತ್ತೆಯಾಗಿಲ್ಲ ಎಂದು ಬಿಪಿನ್ ಹೇಳಿದ್ದಾರೆ. ಸೋನಂ ಅವರನ್ನು ಕಿಡ್ನಾಪ್ ಮಾಡಿದ ಶಂಕೆ ವ್ಯಕ್ತವಾಗಿದೆ. ಆದ್ದರಿಂದ, ಸೋನಂ ಅವರನ್ನು ಆದಷ್ಟು ಬೇಗ ಹುಡುಕಿ, ಸುರಕ್ಷಿತವಾಗಿ ಮನೆ ಕರೆದುಕೊಂಡು ಬರುವಂತೆ ಒತ್ತಾಯಿಸುತ್ತಾರೆ. ಈ ಘಟನೆಯ ತನಿಖೆಯಲ್ಲಿ ಕೇಂದ್ರ ಸರ್ಕಾರ ಮತ್ತು ಮೇಘಾಲಯ ರಾಜ್ಯಪಾಲರು ಮಧ್ಯಪ್ರವೇಶಿಸಬೇಕೆಂದು ಬಿಪಿನ್ ಒತ್ತಾಯಿಸಿದ್ದಾರೆ.