ಕೊರೋನಾ ಕಾರಣ ನೀವ್ಯಾರು ನನ್ನ ಕೈಲಾಸಕ್ಕೆ ಬರಬೇಡಿ: ಭಾರತೀಯರಿಗೆ ನಿತ್ಯಾನಂದ ಸ್ವಾಮಿ ತಾಕೀತು

ಗುರುವಾರ, 22 ಏಪ್ರಿಲ್ 2021 (10:59 IST)
ಬೆಂಗಳೂರು: ಸದಾ ವಿವಾದಗಳಿಂದಲೇ ಸುದ್ದಿಯಾಗುವ ಸ್ವಾಮಿ ನಿತ್ಯಾನಂದ ಈಗ ಮತ್ತೊಂದು ಹೇಳಿಕೆ ಮೂಲಕ ಗುಲ್ಲೆಬ್ಬಿಸಿದ್ದಾನೆ.


ನಿಮ್ಮ ದೇಶದಲ್ಲಿ ಕೊರೋನಾ ಹಾವಳಿ ವಿಪರೀತವಾಗಿದೆ. ಹೀಗಾಗಿ ನೀವು ಯಾರೂ ನನ್ನ ಕೈಲಾಸ ದೇಶಕ್ಕೆ ಈಗ ಬರಬೇಡಿ ಎಂದು ನಿತ್ಯಾನಂದ ಹೇಳಿಕೆ ನೀಡಿದ್ದಾನೆ.

ತನ್ನ ಸ್ವಯಂ ನಿರ್ಮಿತ ಕೈಲಾಸ ದೇಶದಲ್ಲಿ ನೆಲೆಯೂರಿರುವ ನಿತ್ಯಾನಂದ ಕೇವಲ ಭಾರತದವರಿಗೆ ಮಾತ್ರವಲ್ಲ, ಮಲೇಷ್ಯಾ, ಬ್ರೆಜಿಲ್, ಯುರೂಪ್ ರಾಷ್ಟ್ರಗಳಿಂದ ಬರುವವರಿಗೂ ನಿರ್ಬಂಧ ವಿಧಿಸಿದ್ದಾನೆ. ವಿಡಿಯೋ ಬಿಡುಗಡೆ ಮಾಡಿರುವ ನಿತ್ಯಾನಂದ ಈ ರಾಷ್ಟ್ರದಿಂದ ಸದ್ಯಕ್ಕೆ ಯಾರೂ ನನ್ನ ದೇಶಕ್ಕೆ ಬರಬೇಡಿ ಎಂದು ಹೇಳಿಕೊಂಡಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ