ಉತ್ತರ ಪ್ರದೇಶದಲ್ಲಿನ್ನು ಸಾಧಕರ ಜನ್ಮ ದಿನಾಚರಣೆಗೆಲ್ಲಾ ರಜವಿಲ್ಲ!

ಶನಿವಾರ, 15 ಏಪ್ರಿಲ್ 2017 (08:30 IST)
ಲಕ್ನೊ: ದಿನಕ್ಕೊಂದು ಹೊಸ ನಿಯಮ ಜಾರಿಗೆ ತರುತ್ತಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಇಂದು ಹೊಸ ಘೋಷಣೆ ಮಾಡಿದ್ದಾರೆ.  ಇನ್ನು ಮುಂದೆ ರಾಜ್ಯದ ಶಾಲೆಗಳಿಗೆ ಸಾಧಕರ ಜನ್ಮ ದಿನಗಳಿಗೆಲ್ಲಾ ರಜೆ ಘೋಷಿಸದಿರಲು ತೀರ್ಮಾನಿಸಿದ್ದಾರೆ.

 

ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಘೋಷಣೆ ಮಾಡಿದ್ದಾರೆ. ಮಹಾನ್ ಸಾಧಕರ ಜಯಂತಿಗಳಿಗೆ ರಜೆ ಘೋಷಿಸುವ ಬದಲು, ಆ ದಿನ ಅವರ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದಿದ್ದಾರೆ.

 
ಇದೇ ಸಂದರ್ಭದಲ್ಲಿ ಇನ್ನೊಂದು ಮಹತ್ವದ ಘೋಷಣೆ ಮಾಡಿರುವ ಅವರು, ರಾಜ್ಯದ ಎಲ್ಲಾ ವರ್ಗದ ಜನರಿಗೂ ದಿನದ 24 ಗಂಟೆ ವಿದ್ಯುತ್ ಪೂರೈಸುವುದಾಗಿ ಹೇಳಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ