ಕರ್ವಾ ಚೌತ್‌ ದಿನ ಗಂಡ ತಡವಾಗಿ ಬಂದಿದ್ದಕ್ಕೆ ಪತ್ನಿ ಆತ್ಮಹತ್ಯೆ, ನೋವಿನಲ್ಲಿ ಪತಿಯೂ ನೇಣಿಗೆ ಶರಣು

Sampriya

ಸೋಮವಾರ, 21 ಅಕ್ಟೋಬರ್ 2024 (19:48 IST)
ಜೈಪುರ: ಕರ್ವಾ ಚೌತ್ ದಿನ ಪತಿ ತಡವಾಗಿ ಮನೆಗೆ ಬಂದಿದ್ದಕ್ಕೆ ನೊಂದು ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ಜೈಪುರದಲ್ಲಿ ನಡೆದಿದೆ.

ತಡವಾಗಿ ಬಂದ ಪತಿ ಘನಶ್ಯಾಮ್ ಬಂಕರ್ ಜತೆ ಪತ್ನಿ ಮೋನಿಕಾ ಜಗಳವಾಡಿದ್ದಾಳೆ. ಈ ವೇಳೆ ಆಕೆಯನ್ನು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ, ಆಕೆ ಮನೆಯಿಂದ ಹೊರಹೋಗಿದ್ದಾಳೆ. ನಂತರ ರೈಲಿನಡಿಗೆ ತಲೆಯಿಟ್ಟು ಆತ್ಮಹ್ಯತ್ಯೆ ಶರಣಾಗಿದ್ದಾಳೆ. ಪತ್ನಿಯ ಸಾವಿನಿಂದ ಮನನೊಂದ ಘನಶ್ಯಾಮ್ ಕೂಡಾ ನೇಣಿಗೆ ಶರಣಾಗಿದ್ದಾನೆ.

ಪೊಲೀಸರ ಪ್ರಕಾರ, ಅಕ್ಟೋಬರ್ 20 ರಂದು ನಗರದ ಹರ್ಮಾಡಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.

ಘಟನೆಯ ಬಗ್ಗೆ ಮಾತನಾಡಿದ ಜೈಪುರ ಪೊಲೀಸ್ ಅಧಿಕಾರಿಯೊಬ್ಬರು, "ನೆಟ್‌ವರ್ಕ್ ಮಾರ್ಕೆಟಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಘನಶ್ಯಾಮ್ ಅವರು ಕರ್ವಾ ಚೌತ್‌ನಲ್ಲಿ ತಡವಾಗಿ ಮನೆಗೆ ಬಂದಿದ್ದರು, ಇದು ಅವರ ಮತ್ತು ಅವರ ಪತ್ನಿ ನಡುವೆ ಜಗಳಕ್ಕೆ ಕಾರಣವಾಯಿತು, ನಂತರ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ