ದರೋಡೆ ನಾಟಕವಾಡಿದ ಆಭರಣ ಅಂಗಡಿ ಮಾಲೀಕರ ವಿರುದ್ಧ ಕೇಸ್

ಭಾನುವಾರ, 8 ಮೇ 2016 (18:57 IST)
14 ಕೋಟಿ ರೂ. ಚಿನ್ನಾಭರಣ ಕಳೆದ ವಾರ ದರೋಡೆಯಾದ ಆಭರಣ ಅಂಗಡಿಯ ಮಾಲೀಕರ ವಿರುದ್ಧ ಪೊಲೀಸರು ಕೇಸ್ ಫೈಲ್ ಮಾಡಿದ್ದಾರೆ. 10 ಕೋಟಿ ರೂ.  ಇನ್ಷೂರೆನ್ಸ್ ಹಣವನ್ನು ಹೊಡೆಯುವುದಕ್ಕಾಗಿ ಮಾಲೀಕರೇ ಈ ದರೋಡೆಯ ನಾಟಕವಾಡಿದ್ದಾರೆಂದು ಪೊಲೀಸರು ಆರೋಪಿಸಿದ್ದಾರೆ. ವಿನೋದ್ ಮತ್ತು ರಜನೀಶ್ ಎಂಬ ಇಬ್ಬರು ಸೋದರರು ಶೋರೂಂ ಮಾಲೀಕರಾಗಿದ್ದು, ಚಂದೀಘಡದ ಐಷಾರಾಮಿ ಮಾರುಕಟ್ಟೆಯಲ್ಲಿ ಇವರ ಶೋರೂಂ ಇದೆ. ವಿಮೆ ಹಣ ಹೊಡೆಯುವುದಕ್ಕಾಗಿ ಇಡೀ ನಾಟಕವನ್ನು ಇವರಿಬ್ಬರು ರೂಪಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅವರ ಸಂಬಂಧಿಗಳು ಈ ದರೋಡೆಯ ನಾಟಕವಾಡಿದ್ದು, ಪುರಾವೆಗಳ ನಾಶಕ್ಕೆ ಅವರ ಪೈಕಿ ಒಬ್ಬ ಸಿಸಿಟಿವಿ ಮೆಮರಿ ಕಾರ್ಡ್ ಅಡಗಿಸಿಟ್ಟ. ಹಾಡು ಹಗಲಿನಲ್ಲಿ ಈ ನಕಲಿ ದರೋಡೆ ನಡೆದಿದ್ದು, ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಆಗಮಿಸುತ್ತಾರೆ.
 
ಅವರು ಭದ್ರತಾ ಸಿಬ್ಬಂದಿ ಮತ್ತು 6 ಸಿಬ್ಬಂದಿಗೆ ಪಿಸ್ತೂಲು ತೋರಿಸಿ ಕೂಡಿಹಾಕಿ ಚಿನ್ನಾಭರಣ ಮತ್ತು ಆಭರಣ ದೋಚುತ್ತಾರೆ. ಶನಿವಾರ ಗ್ಯಾಂಗ್ ಉಂಗುರು ಬುಕ್ ಮಾಡಿ ಅದನ್ನು ಖರೀದಿಸಲು ಭಾನುವಾರ ಆಗಮಿಸಿ ಅಂಗಡಿಯನ್ನು ದೋಚಿದ್ದರು. ಆದರೆ ಇಬ್ಬರು ಮಾಲೀಕರು ಪೊಲೀಸರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಆಸ್ಪತ್ರೆಗೆ ಸೇರಿದ್ದರಿಂದ ಪೊಲೀಸರು ಅನುಮಾನಗೊಂಡು ಅಂಗಡಿ ಮ್ಯಾನೇಜರ್ ಮೇಲೆ ಒತ್ತಡಹಾಕಿದಾಗ ಅವನು ತಪ್ಪೊಪ್ಪಿಗೆ ಹೇಳಿಕೆ ನೀಡಿದ. 

ವೆಬ್ದುನಿಯಾವನ್ನು ಓದಿ